ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈ ಹೋ ಮೈಲಾರ್ಡ್ ನ್ಯಾ.ಸುಧೀಂದ್ರರಾವ್ !

By Srinath
|
Google Oneindia Kannada News

lokayukta-special-judge-nk-sudhindra-rao-jai-ho
ಬೆಂಗಳೂರು, ಅ 29: ಭ್ರಷ್ಟಾಚಾರದ ವಿರುದ್ಧ ಮುರುಕೊಂಡುಬಿದ್ದವರಂತೆ ಬೀಜಾಸುರರನ್ನು ಒಬ್ಬೊಬ್ಬರಾಗಿ ಜೈಲಿಗಟ್ಟುತ್ತಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಎನ್. ಕೆ. ಸುಧೀಂದ್ರರಾವ್ ಅವರೇ ನಿಮಗಿದೋ ನಾಡಿನ ಪ್ರಜ್ಞಾವಂತ ಜನರ ಕೋಟಿ ವಂದನೆಗಳು! ಯಾವುದೇ ರಾಜಕೀಯ ಒಲವು, ನಿಲುವುಗಳಿಲ್ಲದೆ, ಯಾರದೇ ಮಾನಸಪುತ್ರರೂ ಆಗದೆ ನ್ಯಾಯಕ್ಕೆ ಕಿಂಚಿತ್ತೂ ಅಪಚಾರವಾಗದಂತೆ ನ್ಯಾಯಚಾಟಿ ಬೀಸುತ್ತಿರುವ ಸುಧೀಂದ್ರ ಜೈ ಹೋ.

ಭ್ರಷ್ಟಾಚಾರದ ವಿರುದ್ಧ ಜನಚೇತನಾ ಯಾತ್ರೆಯನ್ನೇ ಹಮ್ಮಿಕೊಂಡಿರುವ ಅಡ್ವಾಣಿ ಬಸವನಗುಡಿಗೆ ಇನ್ನೇನು ಕೆಲವೇ ಹೆಜ್ಜೆಗಳು ದೂರವಿರುವಾಗ ಅವರ ಪಕ್ಷದವರಿಗೆ ಎಂತಾ ಸಂಪನ್ನ ಗಿಫ್ಟ್ ಕೊಟ್ಟಿರಿ. ನೋಡೋಣ! ಅಡ್ವಾಣಿ ಅವರದು ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೇ ರಥಯಾತ್ರೆಯಾಗಿದ್ದರೆ ಬಸವನಗುಡಿ ಸಭೆಯಲ್ಲಿ ನಿಮಗೊಂದು ಶಹಭಾಸ್ ಗಿರಿ ಕೊಡುತ್ತಾರೇನೋ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳಲು ನಾವು ಕಾತುರರಾಗಿದ್ದೇವೆ.

ಅದೆಲ್ಲ ಒತ್ತಟ್ಟಿಗಿರಲಿ ಇದೇನಿದು ಭ್ರಷ್ಟಾಚಾರದ ವಿರುದ್ಧ ನಿಮ್ಮದು ಈ ಪರಿ ಸೌಮ್ಯ ಹೋರಾಟ. ಭ್ರಷ್ಟ ವ್ಯವಸ್ಥೆಯಲ್ಲಿ ಜನಸಾಮಾನ್ಯ ಹತಾಶನಾಗಿ ಮೈಮುದುಡಿಕೊಂಡು ಕುಳಿತಿದ್ದಾಗ ನೀವೇನು ಧಿಗ್ಗನೆ ಎದ್ದು ಕುಳಿತಿದ್ದೀರಿ. ರಾಗ ದ್ವೇಷಗಳಿಲ್ಲದೆ, ಕಾನೂನು ಮಂತ್ರವನ್ನು ಜಪಿಸುತ್ತಿದ್ದೀರಿ. ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ದೂರನ್ನು ಆಲಿಸಿ, ನಾಡಿನ ದೊರೆಯೇ ಆರೋಪಿ ಎಂಬುದನ್ನೂ ಲೆಕ್ಕಿಸದೆ ನ್ಯಾಯದ ಬಂಧನಕ್ಕೆ ಒಪ್ಪಿಸಿದಿರಿ.

ಇವರೆಲ್ಲ ಬರೀ ಆರೋಪಿಗಳೋ ಅಥವಾ ಮುಂದೆ ನಿಮ್ಮೆದುರೇ ಅಪರಾಧಿಗಳೂ ಸಹ ಎಂದು ಸಾಬೀತಾಗುತ್ತಾರೋ ಆ ಮಾತು ಬೇರೆ. ಆದರೆ ಸದ್ಯಕ್ಕಂತೂ ಅವರನ್ನೆಲ್ಲ ಜೈಲಿಗದುಮಿರುವುದನ್ನು ನೋಡಿ ಖಂಡಿತಾ ಪ್ರಜ್ಞಾವಂತ ಜನ ನಿಮಗೊಂದು ಸಲಾಂ ಹೇಳೋ ಹುಕಿಗೆ ಬಿದ್ದಿದ್ದಾನೆ. ಪ್ಲೀಸ್ ಅಕ್ಸಪ್ಟ್!

English summary
After the Lokayukta judge Sudhindra Rao sent KGF MLA Y Sampangi to Judicial Custody people are wondering to know who is this Lokayukta special judge N K Sudhindra Rao amd they want to say "just" Jai ho justice Sudhindra!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X