ಅಡ್ವಾಣಿ ಬೆಂಗಳೂರು ರಥಯಾತ್ರೆ ಮಾರ್ಗದರ್ಶಿ
ಯಾತ್ರೆಯ ಅಂಗವಾಗಿ ಬೆಂಗಳೂರಿನಲ್ಲಿ ಅ.30ರಂದು ಬೆಳಗ್ಗೆ 5 ರಥಗಳು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿವೆ. ಜನ ಚೇತನ ಯಾತ್ರೆಯ ಉದ್ದೇಶ ಕುರಿತಂತೆ ನಗರದ ನಾಗರಿಕರಿಗೆ ತಿಳಿಯಪಡಿಸುವ ದೃಷ್ಟಿಯಿಂದ ಈ ರಥಗಳನ್ನು ರೆಡಿ ಮಾಡಲಾಗಿದೆ.
ಬಿಜೆಪಿ ರಾಧ್ಯಾಕ್ಷರಾದ ಕೆಎಸ್ ಈಶ್ವರಪ್ಪ ಅವರು ಅ.30ರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಪ್ರಚಾರ ರಥಗಳಿಗೆ ಚಾಲನೆ ನೀಡಲಿದ್ದಾರೆ. ಮಲ್ಲೇಶ್ವರದ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ರಥ ಸಂಚಾರ ಮುಗಿದ ನಂತರ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿರುವ ಅಡ್ವಾಣಿಯವರು ಸಂಜೆ 5 ಗಂಟೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅನೇಕ ಬಿಜೆಪಿ ನಾಯಕರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಏನು ಮಾತನಾಡಲಿದ್ದಾರೆ ಎಂಬ ಕುತೂಲಹ ಸಾರ್ವಜನಿಕರಲ್ಲಿ ಮನೆಮಾಡಿದೆ.
ರಥಗಳು ಮತ್ತು ಅವು ಚಲಿಸುವ ಪ್ರದೇಶಗಳು ವಿವರ
ಜನಕಲ್ಯಾಣ ರಥ : ಆನೇಕಲ್, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್ ಮತ್ತು ಯಶವಂತಪುರ.
ಜನವಿಶ್ವಾಸ ರಥ : ಸಿವಿ ರಾಮನ್ ನಗರ, ಮಹದೇವಪುರ, ಕೆಆರ್ ಪುರ, ಸರ್ವಜ್ಞನಗರ ಮತ್ತು ಪುಲಕೇಶಿನಗರ.
ಜನಜಾಗೃತಿ ರಥ : ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮತ್ತು ರಾಜರಾಜೇಶ್ವರಿನಗರ.
ಜನಪ್ರೇರಣ ರಥ : ಹೆಬ್ಬಾಳ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜನಗರ, ವಿಜಯನಗರ, ರಾಜಾಜಿನಗರ ಮತ್ತು ಗಾಂಧಿನಗರ.
ಜನಶಕ್ತಿ ರಥ : ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ, ಚಿಕ್ಕಪೇಟೆ, ಶಾಂತಿನಗರ ಮತ್ತು ಶಿವಾಜಿನಗರ.