ತ್ವರಿತ ಅಲರ್ಟ್ ಗಳಿಗಾಗಿ
For Daily Alerts
50 ರೂ ಕಟ್ಟಿ, ರೆಡ್ಡಿ ಕಡೆಯಿಂದ 1 ಲಕ್ಷ ರೂ ಎಣಿಸಿ
ಭಾರಿ ಸಂಖ್ಯೆಯಲ್ಲಿ ಅಂಚೆ ಕಚೇರಿಗೆ ಬಂದ ಜನ ಸಮೂಹವನ್ನು ಕಂಡು ಕಚೇರಿ ಸಿಬ್ಬಂದಿಗೂ ದಿಗಿಲಾಗಿದೆ. ವಿಷಯವನ್ನು ಕೇಳಿ ಅದು ಸುಳ್ಳು ಸುದ್ದಿ ಎಂದು ಎಷ್ಟು ಹೇಳಿದರೂ ಜನರು ಕೇಳಲು ತಯಾರಿರಲಿಲ್ಲ. ಕೊನೆಗೆ 50 ರೂ ಅರ್ಜಿ ದುಡ್ಡು ಪಡೆದು ಎಲ್ಲರಿಗೂ ಖಾತೆ ಓಪನ್ ಮಾಡಲು ಅವಕಾಶ ನೀಡಬೇಕಾಯಿತು ಎಂದು ಹೆಡ್ ಪೋಸ್ಟ್ ಮಾಸ್ಟರ್ ಮಾಣಿಕ್ಯಂ ರಾವ್ ಹೇಳುತ್ತಾರೆ.
ಸುಮಾರು ಸಾವಿರಕ್ಕೂ ಅಧಿಕ ಹೊಸ ಖಾತೆಗಳನ್ನು ಆರಂಭಿಸಲಾಯಿತು. ರೆಡ್ಡಿಗಳು ಹಾಗೂ ಸತ್ಯ ಸಾಯಿ ಟ್ರಸ್ಟ್ ನಿಂದ ಅವರ ಖಾತೆಗೆ 25 ಸಾವಿರ ದಿಂದ 1 ಲಕ್ಷ ರು ತನಕ ದುಡ್ಡು ಬಂದು ಬೀಳುತ್ತದಂತೆ ಎಂದು ಜನ ನಂಬಿದ್ದಾರೆ, ನಾವು ಬುದ್ಧಿವಾದ ಹೇಳಿದರೆ ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ ಏನು ಮಾಡುವುದು ಎಂದು ಹೆಡ್ ಪೋಸ್ಟ್ ಮಾಸ್ಟರ್ ರಾವ್ ತಮ್ಮ ಸಂಕಟ ತೋಡಿ ಕೊಂಡಿದ್ದಾರೆ.
ಕರ್ನಾಟಕದಲ್ಲೂ ಕೆಲ ತಿಂಗಳುಗಳ ಹಿಂದೆ ಇದೇ ರೀತಿ ಸುದ್ದಿ ಹಬ್ಬಿತ್ತು.. ಏನಂತಾ ಗೊತ್ತಾ.. ಓದಿ ಮುಂದೆ
Comments
English summary
Scam hit Gali Janardhana Reddy, YS Jagan Mohan Redddy and Sathya Sai Trust's black money would be credited to the accounts of ordinary individuals, who have savings accounts in post offices the rumour did the trick. Stampede-like situation created in Kakinada Post Office in Andra Pradesh.
Story first published: Friday, October 28, 2011, 16:11 [IST]