ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಆಪ್ತರಿಂದ ಸಾಕ್ಷಿಗಳಿಗೆ ಬೆದರಿಕೆ, ಸಿ.ಡಿ.ಯಲ್ಲಿ ದಾಖಲು

By Srinath
|
Google Oneindia Kannada News

ಬೆಂಗಳೂರು, ಅ.27: ದೀಪಾವಳಿಯನ್ನು ಕಗ್ಗತ್ತಲೆಯನ್ನಾಗಿಸಿಕೊಂಡು ಸರಳುಗಳ ಹಿಂದೆ ಕರಾಳ ಜೀವನ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿಯ ಅಧಿನಾಯಕರುಗಳಿಗೆ ಇನ್ನೂ ಬುದ್ಧಿ ಬಂದಂತಿಲ್ಲ. ಈ ಮಧ್ಯೆ ಮತ್ತೊಮ್ಮೆ ಇವರ ಕರಾಳ ಮುಖ ಪರಿಚಯವಾಗಿದೆ.

ಮಾರಣಾಂತಿಕ ರಕ್ತ ಕ್ಯಾನ್ಸರಿನಿಂದ ಬಳಲುತ್ತಿರುವ ಕಟ್ಟಾ ಸುಬ್ರಮಣ್ಯ ತಮ್ಮ ಪುತ್ರನ ಸಮೇತ ಜೈಲುಪಾಲಾಗಿ ಯಾವುದೋ ಕಾಲವಾಯಿತು. ಈ ಮಧ್ಯೆ,ಕರಾಳ ಜೀವನ ಸಾಕಾಗಿದ್ದು, ಅಲ್ಲಿಂದ ಹೊರಬೀಳಲು ಪರೋಕ್ಷವಾಗಿ ಯತ್ನಿಸಿದ್ದಾರೆ. ಅದರ ಅಂಗವಾಗಿ, ಕಟ್ಟಾ ಬೆಂಬಲಿಗರು ಕೆಐಎಡಿಬಿ ಡಿನೋಟಿಫಿಕೇಶನ್ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆಯೊಡ್ಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆಐಎಡಿಬಿ ಭೂ ಹಗರಣದ 8ನೇ ಆರೋಪಿ ಬಿ.ಕೆ. ಮಂಜು ವಿರುದ್ಧ ಸಾಕ್ಷ್ಯ ಹೇಳದಂತೆ ಬಂಡಿಕೋಡಿಗೆಹಳ್ಳಿಯ ಮಧುಮತಿ ಎಂಬವರಿಗೆ ಆಮಿಷವೊಡ್ಡಿ, ಅದಕ್ಕೆ ಒಪ್ಪದಿದ್ದಾಗ ಸದರಿ ಮಹಿಳೆಗೆ ಬೆದರಿಕೆ ಹಾಕಿರುವುದು ಬಯಲಾಗಿದೆ.

ತಮಗೆ ಬೆದರಿಕೆ ಹಾಕಿರುವ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಚಿತ್ರೀಕರಣ ಮಾಡಲಾಗಿದ್ದು, ಆ ವಿಡಿಯೋ ಸಿ.ಡಿ. ಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲು ಸಾಕ್ಷಿದಾರರಾದ ಮಧುಮತಿ ನಿರ್ಧರಿಸಿದ್ದಾರೆ. ಬಿ.ಆರ್. ಮುನಿರಾಜು ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಆಮಿಷವೊಡ್ಡಿ ಬೆದರಿಸಿರುವ ಅರ್ಧ ಗಂಟೆಗೂ ಹೆಚ್ಚು ಅವಧಿಯ ಸಂಭಾಷಣೆ ಸಿ.ಡಿ.ಯಲ್ಲಿದೆ ಎನ್ನಲಾಗಿದೆ.

English summary
While Katta Subramanya Naidu is serving a judicial custody (but presently under treatment for cancer in a Mumbai Hospital) in a KAIDB denotification case his supporter BK Manju has threatened the witness in the case. he whole episode is filmed in a CD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X