ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ: ಹಣ ವಾಪಸ್ ಕೇಳಿದ ಮಹಿಳೆಯ ಸೀರೆಗೆ ಕೈ ಹಾಕಿದ ಸ್ವಾಮೀಜಿ

By Srinath
|
Google Oneindia Kannada News

mysore-annadaneshwar-swamiji-sexual-harassment-case
ಮೈಸೂರು, ಅ. 26: ವೀರಶೈವ ಸಮುದಾಯಕ್ಕೆ ಸೇರಿದ ಇಲ್ಲಿನ ಯರಗನಹಳ್ಳಿ ಅನ್ನದಾನೇಶ್ವರ ಮಠದ ಸ್ವಾಮೀಜಿಯ ವಿರುದ್ಧ ವಂಚನೆ ಹಾಗೂ ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರ ವಿರುದ್ಧ ನಜರ್ ಬಾದ್ ಠಾಣೆಯಲ್ಲಿ ದೂರ ದಾಖಲಿಸಲಾಗಿದೆ.

ತಾನು ನೀಡಿದ್ದ ಹಣ ಹಿಂದಿರುಗಿಸುವಂತೆ ಕೇಳಿದ ಕಾರಣ ಸದರಿ ಸ್ವಾಮೀಜಿಯು ಮಹಿಳೆಯ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಜತೆಗೆ ಹಣ ಪಡೆದು ದಂಪತಿಗಳಿಗೆ ವಂಚಿಸಿದ್ದಾರೆ ಎಂಬ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ. ಆದ್ದರಿಂದ ಸೆಕ್ಷನ್ 354 ರ ಅನುಸಾರ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ನಜರಬಾದ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆದರೆ ಈ ಘಟನೆ ಬಗ್ಗೆ ಸ್ವಾಮೀಜಿ ಹೇಳುವುದೇ ಬೇರೆ. ಆರೋಪಿ ಪಾಟೀಲ್ ನನಗೆ ಬಸವ ಜ್ಞಾನ ಮಂದಿರದ ಬಸವಲಿಂಗ ಸ್ವಾಮೀಜಿ ಅವರ ಮೂಲಕ ಪರಿಚಿತನಾದದ್ದು. ಈ ಹಿಂದೆ ಈತ ಮಠದಲ್ಲಿ ಹಣ ಕಳವು ಮಾಡಿದ್ದ. ಈತನೇ ಹಣ ಕದ್ದದ್ದು ಎಂಬುದು ತಿಳಿದು ಆತನಿಂದ ಹಣ ವಸೂಲಿ ಮಾಡಲಾಗಿತ್ತು.

ಈ ಹಳೇ ವೈಷಮ್ಯವನ್ನು ಇಟ್ಟುಕೊಂಡು ನನ್ನ ವಿರುದ್ಧ ಕಟ್ಟುಕಥೆ ಕಟ್ಟಿದ್ದಾರೆ ಈ ದಂಪತಿ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ಜತೆಗೆ ಯಾರಿಗೂ ಮನೆ ಕಟ್ಟಿಕೊಡುವುದಾಗಲಿ ಅಥವಾ ಕಾಂಪ್ಲೆಕ್ಸ್ ಉಸ್ತುವಾರಿ ವಹಿಸುತ್ತೇನೆ ಎಂದಾಗಲಿ ಹೇಳಿಲ್ಲ. ಅಸಲಿಗೆ ಇವರು ಯಾರು, ಹಿನ್ನೆಲೆ ಏನು ಎಂಬುದೇ ನನಗೆ ತಿಳಿದಿಲ್ಲ ಎಂದು ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

English summary
Mysore Yaraganahalli Annadaneshwar Mutt Swamiji is involved in sexual harassment case. Also it is reported that he has cheated the couple for Rs. 1.5 lakh .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X