ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕರ್ ನಾಗ್ ಹೆಸರಿಡುವ ಬಗ್ಗೆ ಡಿವಿಎಸ್ ಮೌನ?

By Mahesh
|
Google Oneindia Kannada News

Shankar Nag
ಬೆಂಗಳೂರು, ಅ.20: ನಮ್ಮ ಮೆಟ್ರೋ ರೈಲು ಹಾಗೂ ಬಿಎಂಆರ್ ಸಿಎಲ್ ಸಿಬ್ಬಂದಿಗಳಲ್ಲಿ ಕನ್ನಡತನ ಮೆರೆಯಲಿ ಎಂದು ವಾಟಾಳ್ ನಾಗರಾಜ್ ತಮಟೆ ಬಾರಿಸಿ ಎಚ್ಚರಿಕೆ ಮೂಡಿಸಿದ್ದಾರೆ.

ಈ ಮಧ್ಯೆ ಬಹು ನಿರೀಕ್ಷಿತ ಮೆಟ್ರೋ ರೈಲಿನ ಕನಸನ್ನು ಸುಮಾರು 20 ವರ್ಷಗಳ ಹಿಂದೆ ಕನಸು ಕಂಡಿದ್ದ ಕನ್ನಡದ ಅದ್ಭುತ ಪ್ರತಿಭೆ ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ಮೆಟ್ರೋ ರೈಲಿಗೆ ಇಡಬೇಕು ಅಥವಾ ಮೆಟ್ರೋ ಸ್ಟೇಷನ್ ಗಳಿಗೆ ಶಂಕರ್ ಹೆಸರಿಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಾ ಬಂದಿದ್ದಾರೆ.

ಅದರೆ, ಮೆಟ್ರೋ ಉದ್ಘಾಟನೆಗೆ ಮುನ್ನ ಖಾಸಗಿ ಸುದ್ದಿ ವಾಹಿನಿಯೊಡನೆ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡರು, ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರಿಡುವ ಬಗ್ಗೆ ನನಗೆ ತಿಳಿದಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿರುವುದನ್ನು ಎರಡು ಮೂರು ದಿನಗಳಿಂದ ನೋಡಿದ್ದೇನೆ.

ಅಧಿಕೃತವಾಗಿ ಯಾವುದೇ ಮನವಿ ಕೈ ಸೇರಿಲ್ಲ. ಸದ್ಯಕ್ಕಂತೂ ಈ ಬಗ್ಗೆ ಚಿಂತಿಸಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಈ ಮೂಲಕ ಕನಿಷ್ಠ ಪಕ್ಷ ಶಂಕರ್ ನಾಗ್ ಥೇಟರ್ ಸಮೀಪದ ಎಂಜಿ ರಸ್ತೆ ನಿಲ್ದಾಣಕ್ಕಾದರೂ ಶಂಕರ್ ಹೆಸರಿಡುವುದಾಗಿ ಸಿಎಂ ಘೋಷಿಸುತ್ತಾರೆ ಎಂಬ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದಂತಾಗಿದೆ.

English summary
BMRCL Namma Metro launch: CM DV Sadananda Gowda owes success of Namma Metro to former CM Yeddyurappa. BSY had great vision to improve Bangalore. But did not commit on naming metro station after actor Shankar Nag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X