ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತ್ಯಾಗಜೀವಿ ಶಂಕರಪ್ಪ ಸಿಎಂಗಾಗಿ ಪಟ್ಟ ಬಿಟ್ಟನಪ್ಪ
ಯಡಿಯೂರಪ್ಪ ಅವರ ವಿರೋಧದ ನಡುವೆಯೂ ರಾಯಚೂರಿನಿಂದ ಬೆಂಗಳೂರಿಗೆ ಹಾರಿ ಬಂದ ಎಂಎಲ್ ಸಿ ಶಂಕರಪ್ಪ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರ ಮೂರ್ತಿ ಅವರಿಗೆ ನೀಡಿದರು.
ಪಕ್ಷದ ಹಿರಿಯ ನಾಯಕರ ನಿರ್ಧಾರ ಹಾಗೂ ಸಿಎಂಗೆ ಸ್ಥಾನ ಕಲ್ಪಿಸಿಕೊಡುವ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಶಂಕರಪ್ಪ ಅವರು ಹೇಳಿದ್ದಾರೆ.
ಹಿಂದುಳಿದ ಆಯೋಗಕ್ಕೆ ಅಧ್ಯಕ್ಷ ದೊರಕುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ನಿಜ. ಪಕ್ಷ ನನಗೆ ಯಾವ ಸ್ಥಾನ ನೀಡುತ್ತದೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ, ನಿಷ್ಠೆಯಿಂದ ನನ್ನ ಕರ್ತವ್ಯ ನಿಭಾಯಿಸುತ್ತೇನೆ ಎಂದು ಶಂಕರಪ್ಪ ಹೇಳಿದರು. ಅಲ್ಲಿ ಎಲ್ಲೂ ಯಡಿಯೂರಪ್ಪ ಬೆಂಬಲಿಗರ ಸುಳಿವಿರಲಿಲ್ಲ.
Comments
ರಾಜೀನಾಮೆ ಸದಾನಂದ ಗೌಡ ವಿಧಾನಸೌಧ ಯಡಿಯೂರಪ್ಪ ಬಿಜೆಪಿ ಎಂಎಲ್ ಸಿ sadananda gowda vidhana soudha yediyurappa bjp mlc
English summary
MLC Shankarappa has resigned from his post to make his way to CM DV Sadananda Gowda to to enter the Legislative Council through a bypoll. Shankarappa is offered state backward classes commission chairman post.
Story first published: Friday, October 14, 2011, 14:52 [IST]