ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಹಳೆ ವಿದ್ಯಾರ್ಥಿ ಇನ್ಫಿ ಮೂರ್ತಿ ಕೊಂಕು ನುಡಿ

By Mahesh
|
Google Oneindia Kannada News

NR Narayana Murthy
ಬೆಂಗಳೂರು, ಅ.5: ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರಿಗೆ ಯಾಕೋ ಟೈಮ್ ಸರಿ ಇದ್ದಂತೆ ಕಾಣಿಸುತ್ತಿಲ್ಲ.

ಮನೇಲಿ ಮಾತ್ರ ಕನ್ನಡ ಮಾತಾಡುತ್ತೀನಿ ಎಂದು ಹೇಳಿ ಕನ್ನಡ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದ್ದರು. ಇತ್ತೀಚೆಗೆ ಐಐಟಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಪ್ರಶ್ನಿಸಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

ಕುತೂಹಲದ ಸಂಗತಿ ಎಂದರೆ ಇನ್ಫೋಸಿಸ್ ನ ಸ್ಥಾಪಕರಲ್ಲಿ ನಾರಾಯಣ ಮೂರ್ತಿ ಹಾಗೂ ನಂದನ್ ನಿಲೇಕಣಿ ಇಬ್ಬರೂ ಐಐಟಿ ಹಳೆ ವಿದ್ಯಾರ್ಥಿಗಳಾಗಿದ್ದಾರೆ.

ಅ.3ರಂದು ನ್ಯೂಯಾರ್ಕ್ ನಲ್ಲಿ ನೂರಾರು ಜನ ಐಐಟಿ ವಿದ್ಯಾರ್ಥಿಗಳು ಸೇರಿದ್ದ ಸಮಾವೇಶದಲ್ಲಿ
"Thanks to the coaching classes today, the quality of students entering IITs has gone lower and lower."
ಎಂದು ಹೇಳಿದ್ದರು.

ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗುವ ಟಾಪ್ ವಿದ್ಯಾರ್ಥಿಗಳಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ವಿಶ್ವದ ಯಾವುದೇ ಸ್ಥಳದಲ್ಲಾದರೂ ಶ್ರೇಷ್ಠತೆ ಮೆರೆಯಬಲ್ಲರು. ಉಳಿದ ಶೇ.80 ರಷ್ಟು ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಹೇಳದಿರುವುದೇ ಒಳ್ಳೆಯದು ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದರು.

English summary
Ex IITian Infosys mentor NR Narayana Murthy on standard of students in the IITs is declining. Chetan termed Infosys as Body Shopping company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X