ರಾಜ್ಯಾದ್ಯಂತ ಸೌಂದರ್ಯಲಹರೀ ಪಾರಾಯಣ
ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಸಾಮೂಹಿಕವಾಗಿ ನಿರಂತರವಾಗಿ ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಸರಿಯಾಗಿ ಸೌಂದರ್ಯ ಲಹರೀ ಪಾರಾಯಣ ಕಾರ್ಯಕ್ರಮವನ್ನು ರೂಪಿಸಿದ್ದು, ಜೊತೆಗೆ ಶಿವಾನಂದ ಲಹರಿ, ದಶಶ್ಲೋಕೀ, ಗುರ್ವಷ್ಟಕ, ನಿರ್ವಾಣ ಷಟ್ಕ ಹಾಗೂ ಶಾಂಕರ ಸ್ತವ ಮಾಲಾದಲ್ಲಿರುವ ಇನ್ನಿತರ ಶ್ಲೋಕಗಳ ಪಾರಾಯಣವೂ ನಡೆಯಲಿದೆ.
ತುಮಕೂರು ನಗರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಪಾರಾಯಣ ವ್ಯವಸ್ಥೆ ಮಾಡಲಾಗಿದೆ. ಸರ್ವ ಸಮಾಜದ ಸಮಸ್ತ ನಾಗರಿಕರು, ತಾಯಂದಿರು, ಮಹನೀಯರು, ವಿದ್ಯಾರ್ಥಿಗಳು, ವಿವಿಧ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು, ಮಹಿಳಾ ಮಂಡಳಿಗಳು ಪ್ರತಿ ಮಂಗಳವಾರ ಸಂಜೆ 6 ಗಂಟೆಯಿಂದ ತಮ್ಮ ಬಡಾವಣೆಗಳಲ್ಲಿ, ದೇವಾಲಯಗಳಲ್ಲಿ, ಮನೆಗಳಲ್ಲಿ ಸಮಾವೇಶಗೊಂಡು ಸ್ತ್ರೋತ್ರ ಪಾರಾಯಣ ಸತ್ರದಲ್ಲಿ ಭಾಗವಹಿಸಲಿದ್ದಾರೆಂದು ವೇದಾಂತ ಭಾರತೀ ನಗರ ಸಂಚಾಲಕ ನಾ. ವೆಂಕಟೇಶ ಜೋಯಿಸ್ ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಾ. ವೆಂಕಟೇಶ ಜೋಯಿಸ್, (ಮೊಬೈಲ್: 98452 30487, 96111 55224) ಶ್ರೀಗಿರಿ ನಿಲಯ, 5 ನೇ ಮುಖ್ಯರಸ್ತೆ, ಶಿವಮೂಕಾಂಬಿಕ ನಗರ, ಉಪ್ಪಾರಹಳ್ಳಿ ರಸ್ತೆ, ತುಮಕೂರು ಅವರನ್ನು ಸಂಪರ್ಕಿಸಲು ಕೋರಲಾಗಿದೆ.