ಅತ್ಯಾಚಾರ ಆರೋಪ ಕಾಂಗ್ರೆಸ್ ಲೀಡರ್ ಸೆರೆ
ಹಶ್ರು ಪಠಾಣ್ ಎಂಬ ಕಾಂಗ್ರೆಸ್ ನಾಯಕನನ್ನು ಕೋಟಾ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅ.3ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಘಟನೆ ನಂತರ ಪಠಾಣ್ ರನ್ನು ಜಿಲ್ಲಾ ವಕ್ಫ್ ಸಮಿತಿ ಮುಖ್ಯಸ್ಥ ಸ್ಥಾನದಿಂದ ಕಿತ್ತು ಹಾಕಿ ಅಜೀಜ್ ಅನ್ಸಾರಿ ಅವರನ್ನು ನೇಮಿಸಲಾಗಿದೆ ಎಂದು ವಕ್ಫ್ ಬೋರ್ಡ್ ಮುಖ್ಯಸ್ಥ ಲಿಯಾಕತ್ ಅಲಿ ಹೇಳಿದ್ದಾರೆ.
ಉತ್ತರಾಖಂಡ್ ಮೂಲದ ಮಹಿಳೆ ಹೇಳಿಕೆ ಪ್ರಕಾರ, ಆಕೆ 2011ರ ಮೇ ತಿಂಗಳಿನಲ್ಲಿ ಮದುವೆಯಾದಳಂತೆ. ಮೂರು ತಿಂಗಳ ಸಂಸಾರ ನಂತರ ಪಠಾಣ್ ಆಕೆಗೆ ವಿವಾಹ ವಿಚ್ಛೇದನ ನೀಡಿದ್ದನು. ಆದರೆ, ಶನಿವಾರ ತಡರಾತ್ರಿ ಆಕೆಯಿದ್ದ ಅಪಾರ್ಟ್ಮೆಂಟ್ ಗೆ ನುಗ್ಗಿದ ಪಠಾಣ್ ಆಕೆಯ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿ, ಅತ್ಯಾಚಾರ ನಡೆಸಿದ್ದಾನೆ.
ಮಹಿಳೆ ಬೊಬ್ಬೆ ಹೊಡೆದ ಮೇಲೆ ಎಚ್ಚೆತ್ತುಕೊಂಡ ಅಕ್ಕ ಪಕ್ಕದ ಫ್ಲ್ಯಾಟ್ ನ ಮಂದಿ ಇಬ್ಬರು ನೋಡಬಾರದ ಸ್ಥಿತಿಯಲ್ಲಿ ನೋಡಿದ್ದಾರೆ, ನಂತರ ಕಾಂಗ್ರೆಸ್ ನಾಯಕರನ್ನು ಸಮೀಪದ ಮಹಾವೀರ್ ನಗರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲಿಂದ ಪ್ರಕರಣ ಮುಂದೆ ಕೋಟಾ ಠಾಣೆಗೆ ವರ್ಗ ಆಗಿ ತನಿಖೆ ವಿಚಾರಣೆ ಮುಂದುವರೆದಿದೆ.