ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓಎಂಸಿ ಮೇಲೆ ಮತ್ತೆ ಸಿಬಿಐ ದಾಳಿ, ಡಿಸ್ಕ್ ವಶ
ಓಎಂಸಿ ಕಂಪನಿಯ ಎಂಡಿ ಶ್ರೀನಿವಾಸ ರೆಡ್ಡಿ ಹಾಗೂ ಮಾಲೀಕ ಜನಾರ್ದನ ರೆಡ್ಡಿ ಅವರು ಇನ್ನೂ ವಿಚಾರಣಾಧೀನ ಖೈದಿಗಳಾಗಿ ಹೈದರಾಬಾದಿನಲ್ಲಿದ್ದಾರೆ. ಈ ನಡುವೆ ಮತ್ತೊಮ್ಮೆ ಓಎಂಸಿ ಕಚೇರಿ ಮೇಲೆ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.
ಓಎಂಸಿ ಕಚೇರಿಯಲ್ಲಿದ್ದ ಸಿಡಿ, 4 ಹಾರ್ಡ್ ಡಿಸ್ಕ್, ಮೂರು ಕಂಪ್ಯೂಟರ್ ಸೇರಿದಂತೆ ಅಮೂಲ್ಯ ಕಡತಗಳನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಈ ಪರಿಕರಗಳು ಸಾಕ್ಷ್ಯವಾಗಿ ಬಳಸಲು ಸಿಬಿಐ ನಿರ್ಧರಿಸಿದೆ ಎನ್ನಲಾಗಿದೆ.
ಡಿ.10, 2009ರಲ್ಲೂ ಕೂಡಾ ಸಿಬಿಐ ತಂಡ ಓಎಂಸಿ ಕಚೇರಿ ಬಾಗಿಲು ಮುರಿದಿತ್ತು. ಈ ಬಾರಿ 11 ಮಂದಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವ ಬೆನ್ನಲ್ಲೇ ಈ ರೀತಿ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ. ದಾಳಿ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಸಿಬಿಐ ತಂಡ ಅಧಿಕೃತವಾಗಿ ಇನ್ನೂ ಹೇಳಿಕೆ ನೀಡಿಲ್ಲ.
Comments
ಜನಾರ್ದನ ರೆಡ್ಡಿ ಸಿಬಿಐ ಓಎಂಸಿ ಅಕ್ರಮ ಗಣಿಗಾರಿಕೆ ಜೈಲು ಬಳ್ಳಾರಿ cbi janardhana reddy omc illegal mining jail
English summary
CBI team conducted yet another raid in the Obulapuram Mining Company (OMC) offices on Sunday(Sept.26). CBI team seize four hard discs, three computers and a number of files and Cds. OMC MD Srinivas Reddy and owner Janardhana Reddy are still in Jail.
Story first published: Monday, September 26, 2011, 10:07 [IST]