ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಸುಳೆಯ ರೇಪ್, ಹತ್ಯೆ: ಸೆರೆಸಿಕ್ಕ ವೆಲ್ಲೂರು ಪೂಜಾರಿ
ಗುಡಿಯಾತ್ತಂನ ಕೆ ಕುಮಾರ ಗುರುಕ್ಕಲ್ ಸೋಮವಾರದಂದು ಹಸುಳೆಯನ್ನು ಅಪಹರಿಸಿ, ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದ. ಶವವನ್ನು ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದು, ಮಂಗಳವಾರ ರಾತ್ರಿ ಬಾವಿಗೆ ಎಸೆದಿದ್ದ. ಸ್ಥಳೀಯ ರೈತರೊಬ್ಬರು ಬುಧವಾರ ಬೆಳಗ್ಗೆ ತಮ್ಮ ತೋಟದ ಬಾವಿಯಲ್ಲಿ ಮಗುವಿನ ಶವ ಬಿದ್ದಿರುವುದನ್ನು ಪತ್ತೆಹಚ್ಚಿದ್ದರು. ಕುಟುಂಬದವರಿಂದ ದೂರವಾಗಿರುವ ಆರೋಪಿ, ಕಳೆದ 16 ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಕುಮಾರ ಗುರುಕ್ಕಲ್ ಮನೆಯು ಮೃತ ಮಗುವಿನ ಮನೆಯ ಬಳಿಯೇ ಇದೆ. ಜತೆಗೆ, ಐದು ವರ್ಷದ ಹಿಂದೆಯೂ ಇಂತಹುದೇ ಅಪರಾಧವೆಸಗಿದ್ದ. ಅದೇ ಅನುಮಾನದ ಮೇಲೆ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತಾನೇ ಕುಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಮಧ್ಯೆ, ಬಾಲಕಿಯ ಮೇಲೆ ಅನೇಕ ಬಾರಿ ಅತ್ಯಾಚಾರವಾಗಿರುವುದು ಮತ್ತು ಉಸಿರುಗಟ್ಟಿಸಿ ಸಾಯಿಸಿರುವುದು ಶವಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
Comments
ಕ್ರೈಂ ಕಳ್ಳತನ ವಂಚನೆ ಪ್ರೇಮ ವಿವಾಹ ಆತ್ಮಹತ್ಯೆ ಚೆನ್ನೈ ಲ್ಯಾಪ್ಟಾಪ್ crime beat fraud love marriage suicide laptop chennai
English summary
A 46-year-old priest K Kumara Gurukkal of Pandian Nagar, was arrested on Thursday on charges of raping and killing a five year old girl in Gudiyattam, about 30km from Vellore town. Kumara Gurukkal has been remanded in judicial custody.
Story first published: Friday, September 23, 2011, 11:52 [IST]