ವೋಟಿಗಾಗಿ ನೋಟು: ಸೋನಿಯಾ ಕಾರ್ಯದರ್ಶಿ ಅಹ್ಮದ್ ರುವಾರಿ
ಮತ ಲಂಚ ನೀಡಿದ್ದು ಕಾಂಗ್ರೆಸ್ ನಾಯಕ ಎಂದು ದಿಲ್ಲಿ ಕೋರ್ಟ್ ನಲ್ಲಿ ಅಮರ್ ಸಿಂಗ್ ಪರ ವಕೀಲ ರಾಂ ಜೇಠ್ಮಲಾನಿ ಹೇಳುವ ಮೂಲಕ ಪ್ರಕರಣದ ದಿಕ್ಕು ಬದಲಿಸಿದ್ದಾರೆ.
ಇಲ್ಲಿನ ಲೀ ಮೆರಿಡಿಯನ್ ಹೊಟೇಲ್ನಲ್ಲಿ ಸಂಸದರಿಗೆ ಮತ ಲಂಚ ನೀಡಿದ್ದು, ಹಣದ ಮೂಲ ಒದಗಿಸಿದ್ದು ಅಹ್ಮದ್ ಪಟೇಲ್ ಎಂದು ವಿಶೇಷ ನ್ಯಾಯಾಧೀಶೆ ಸಂಗೀತಾ ದಿಂಗ್ರಾ ಸೆಹ್ಗಲ್ ಮುಂದೆ ಹೇಳಿದರು.
ಮತ ಲಂಚ ನೀಡಿದ್ದು, ಅಮರ್ ಸಿಂಗ್ ನಿವಾಸದಲ್ಲಲ್ಲ, ಬದಲಿಗೆ ಲೀ ಮೆರಿಡಿಯನ್ ಹೊಟೇಲ್ನಲ್ಲಿ. ಹಣ ನೀಡಿದ್ದು ಅಮರ್ ಸಿಂಗ್ ಅಲ್ಲ, ಸರಕಾರವನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ಸಂಸದ ಮತ್ತು ಪಕ್ಷದಲ್ಲಿನ ಪ್ರಭಾವಿ ನಾಯಕ ಅಹ್ಮದ್ ಪಟೇಲ್ ಎಂದು ಜೇಠ್ಮಲಾನಿ ವಾದಿಸಿದರು.
ಪಕ್ಷದ ಪರವಾಗಿ ಇತರೆ ಪಕ್ಷದ ಸಂಸದರ ಮೇಲೆ ಪ್ರಭಾವ ಬೀರಿರುವ ಅಹ್ಮದ್ ಪಟೇಲ್ ಮತ ಲಂಚ ನೀಡಿದವರಾಗಿದ್ದಾರೆ ಎಂದು ಅವರು ವಾದಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಅಮರ್ ಸಿಂಗ್ ವಿರುದ್ಧ ಪ್ರಕರಣದಲ್ಲಿ ಯಾವುದೇ ಸಾಂದರ್ಭಿಕ ಸಾಕ್ಷಿಗಳಿಲ್ಲ ಹಾಗಾಗಿ ಅವರ ಮಧ್ಯಾಂತರ ಜಾಮೀನನ್ನು ವಿಸ್ತರಿಸಬೇಕು ಎಂದು ಅವರು ಕೋರ್ಟ್ಗೆ ಮನವಿ ಮಾಡಿದರು.
ಅಮರ್
ಸಿಂಗ್
ಅವರ
ಮಧ್ಯಂತರ
ಜಾಮೀನು
ಅವಧಿಯನ್ನು
ಸೆ.
27ರವರೆಗೆ
ವಿಸ್ತರಿಸಲಾಗಿದೆ.
ಮತ್ತೊಬ್ಬ
ಆರೋಪಿ
ಸುಧೀಂದ್ರ
ಕುಲಕರ್ಣಿಗೆ
ಸೆ.
27ರೊಳಗೆ
ತಪ್ಪದೆ
ನ್ಯಾಯಾಲಯಕ್ಕೆ
ಹಾಜರಾಗುವಂತೆ
ವಿಶೇಷ
ನ್ಯಾಯಾಧೀಶೆ
ಸಂಗೀತಾ
ದಿಂಗ್ರಾ
ಸೂಚಿಸಿದ್ದಾರೆ.