ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿನಗರ ಪ್ರದೇಶಕ್ಕೆ ದೊಡ್ಡ ಗೌಡರ ಭೇಟಿ

|
Google Oneindia Kannada News

devegowda
ಬೆಂಗಳೂರು, ಸೆ. 18: ಬೆಂಗಳೂರಿನ ಕೆಂಗೇರಿ ಉಪನಗರದ ಬಳಿ ಇರುವ ಗಾಂಧಿನಗರ ಪ್ರದೇಶಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಭೇಟಿ ನೀಡಿದ್ದಾರೆ. ಅವರು ಅಲ್ಲಿ ಸ್ಥಳ ಪರಿಶೀಲನೆ ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಅಲ್ಲಿದ್ದ ಸುಮಾರು 2500 ಮನೆಗಳ ತೆರವಿಗೆ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ದೇವೇಗೌಡರು ಸ್ಥಳಿಯರೊಂದಿಗೆ ನಡೆಸಿದ ಮಾತುಕತೆ, ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ.

ದೇವೇಗೌಡರ ಭೇಟಿಯೆಂದರೆ ಎಲ್ಲರಿಗೂ ಕುತೂಹಲ ಸಹಜ. 24 ಗಂಟೆಗಳೂ ರಾಜಕೀಯವನ್ನೇ ಉಸಿರಾಡುವ ದೇವೇಗೌಡ್ರು ಎಲ್ಲಿ ಹೋದರೂ ಜನರ ಕಣ್ಣುಗಳು ಹಿಂಬಾಲಿಸಿವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದೊಡ್ಡಗೌಡರ ಈ ಭೇಟಿಯ ಲಾಭ ಅಲ್ಲಿನ ಜನರಿಗೆ ಲಭ್ಯವಾಗಲಿದೆಯೇ ಅಥವಾ ಕಂದಾಯ ಇಲಾಖೆಯ ಕಾರ್ಯ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ!

English summary
Former Prime Minister Devegowda has visited Gandhinagar near kengeri upanagar. Tax Department has issued notice to vacate 2500 houses there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X