ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಂಧಿನಗರ ಪ್ರದೇಶಕ್ಕೆ ದೊಡ್ಡ ಗೌಡರ ಭೇಟಿ
ಅಲ್ಲಿದ್ದ ಸುಮಾರು 2500 ಮನೆಗಳ ತೆರವಿಗೆ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ದೇವೇಗೌಡರು ಸ್ಥಳಿಯರೊಂದಿಗೆ ನಡೆಸಿದ ಮಾತುಕತೆ, ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ.
ದೇವೇಗೌಡರ ಭೇಟಿಯೆಂದರೆ ಎಲ್ಲರಿಗೂ ಕುತೂಹಲ ಸಹಜ. 24 ಗಂಟೆಗಳೂ ರಾಜಕೀಯವನ್ನೇ ಉಸಿರಾಡುವ ದೇವೇಗೌಡ್ರು ಎಲ್ಲಿ ಹೋದರೂ ಜನರ ಕಣ್ಣುಗಳು ಹಿಂಬಾಲಿಸಿವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದೊಡ್ಡಗೌಡರ ಈ ಭೇಟಿಯ ಲಾಭ ಅಲ್ಲಿನ ಜನರಿಗೆ ಲಭ್ಯವಾಗಲಿದೆಯೇ ಅಥವಾ ಕಂದಾಯ ಇಲಾಖೆಯ ಕಾರ್ಯ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ!
Comments
English summary
Former Prime Minister Devegowda has visited Gandhinagar near kengeri upanagar. Tax Department has issued notice to vacate 2500 houses there.
Story first published: Sunday, September 18, 2011, 15:21 [IST]