ಕರ್ನಾಟಕದಲ್ಲಿ ಚಟ್ನಿಯಾದ ಲಾ ಟೊಮ್ಯಾಟಿನಾ ಹಬ್ಬ
ರೈತರಿಗೆ ಮಾರಕವಾಗಿದ್ದ ಈ ಟೊಮ್ಯಾಟೋ ಹೋಳಿ ಹಬ್ಬದ ವಿರುದ್ಧ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅನೇಕ ದೂರುಗಳನ್ನು ಸಿಎಂ ಸದಾನಂದ ಗೌಡರಿಗೆ ಸಲ್ಲಿಸಲಾಗಿತ್ತು.
ಬೆಂಗಳೂರಲ್ಲದೆ ಮೈಸೂರಿನಲ್ಲೂ ಈ ಹಬ್ಬ ಆಚರಣೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಟೊಮ್ಯಾಟೋ ದುರ್ಬಳಕೆ ಮಾಡಿ, ರೈತರ ಬೆವರ ಹನಿಗೆ ಬೆಲೆ ಇಲ್ಲದಂತೆ ಮಾಡುವ ಯುವಕರು ಪಾಶ್ಚಾತ್ಯ ಸಂಸ್ಕೃತಿಯತ್ತ ಕೊಂಡೊಯ್ಯುವ ಈ ಹಬ್ಬ ನಮ್ಮ ಸಂಸ್ಕೃತಿಗೆ ಮಾರಕ ಎಂದು ಸದಾನಂದ ಗೌಡರು ಅಭಿಪ್ರಾಯಪಟ್ಟಿದ್ದಾರೆ.
ಲಾ ಟೋಮ್ಯಾಟಿನೊ[ಸಂಪೂರ್ಣ ಕಥೆ ಓದಿ] ಬೇಕೇ?ಬೇಡವೇ? ಎಂಬುದರ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಕೆಲ ಸಂಘಟನೆಗಳು ಆನ್ ಲೈನ್ ಮೂಲಕ ಈ ಹಬ್ಬದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಸೆ.18 ರಂದು ಅರಮನೆ ಮೈದಾನದಲ್ಲಿ ಲಾ ಟೋಮ್ಯಾಟಿನಾ ಹಬ್ಬ ಆಚರಣೆಗೆ ವೇದಿಕೆ ಸಿದ್ಧವಾಗಿತ್ತು. ಸ್ಪ್ಯಾನಿಷ್ ಟೊಮ್ಯಾಟೊ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಯುವಕ/ತಿಯರು ಸಾವಿರಾರು ರುಪಾಯಿ ಟಿಕೆಟ್ ತೆತ್ತು ಮಜಾ ಮಾಡಲು ಕಾದಿದ್ದರು.
ಆದರೆ, ರೈತಪರ ನಿಲುವು ತೆಗೆದುಕೊಂಡ ಮುಖ್ಯಮಂತ್ರಿ ಸದಾನಂದ ಗೌಡ, ಹಬ್ಬಕ್ಕೆ ನಿಷೇಧ ಹೇರಿದ್ದಾರೆ.