ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಚಟ್ನಿಯಾದ ಲಾ ಟೊಮ್ಯಾಟಿನಾ ಹಬ್ಬ

By Mahesh
|
Google Oneindia Kannada News

La Tomatina festival Cancel
ಬೆಂಗಳೂರು, ಸೆ.11: ಜಿಂದಗಿ ನಾ ಮಿಲೇ ದುಬಾರಾ ಚಿತ್ರದಲ್ಲಿ ಲಾ ಟೊಮ್ಯಾಟಿನಾ ಕೊಳೆತ ಟೊಮ್ಯಾಟೋ ಎರೆಚಾಡುವ ಸ್ಪ್ಯಾನಿಷ್ ಹಬ್ಬ ಬೆಂಗಳೂರಿನಲ್ಲಿ ರಿಪೀಟ್ ಮಾಡಲು ಚಿಂತಿಸಿದ್ದವರಿಗೆ ಕರ್ನಾಟಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ತಣ್ಣೀರೆರೆಚಿದ್ದಾರೆ.

ರೈತರಿಗೆ ಮಾರಕವಾಗಿದ್ದ ಈ ಟೊಮ್ಯಾಟೋ ಹೋಳಿ ಹಬ್ಬದ ವಿರುದ್ಧ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅನೇಕ ದೂರುಗಳನ್ನು ಸಿಎಂ ಸದಾನಂದ ಗೌಡರಿಗೆ ಸಲ್ಲಿಸಲಾಗಿತ್ತು.

ಬೆಂಗಳೂರಲ್ಲದೆ ಮೈಸೂರಿನಲ್ಲೂ ಈ ಹಬ್ಬ ಆಚರಣೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಟೊಮ್ಯಾಟೋ ದುರ್ಬಳಕೆ ಮಾಡಿ, ರೈತರ ಬೆವರ ಹನಿಗೆ ಬೆಲೆ ಇಲ್ಲದಂತೆ ಮಾಡುವ ಯುವಕರು ಪಾಶ್ಚಾತ್ಯ ಸಂಸ್ಕೃತಿಯತ್ತ ಕೊಂಡೊಯ್ಯುವ ಈ ಹಬ್ಬ ನಮ್ಮ ಸಂಸ್ಕೃತಿಗೆ ಮಾರಕ ಎಂದು ಸದಾನಂದ ಗೌಡರು ಅಭಿಪ್ರಾಯಪಟ್ಟಿದ್ದಾರೆ.

ಲಾ ಟೋಮ್ಯಾಟಿನೊ[ಸಂಪೂರ್ಣ ಕಥೆ ಓದಿ] ಬೇಕೇ?ಬೇಡವೇ? ಎಂಬುದರ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಕೆಲ ಸಂಘಟನೆಗಳು ಆನ್ ಲೈನ್ ಮೂಲಕ ಈ ಹಬ್ಬದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ಸೆ.18 ರಂದು ಅರಮನೆ ಮೈದಾನದಲ್ಲಿ ಲಾ ಟೋಮ್ಯಾಟಿನಾ ಹಬ್ಬ ಆಚರಣೆಗೆ ವೇದಿಕೆ ಸಿದ್ಧವಾಗಿತ್ತು. ಸ್ಪ್ಯಾನಿಷ್ ಟೊಮ್ಯಾಟೊ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಯುವಕ/ತಿಯರು ಸಾವಿರಾರು ರುಪಾಯಿ ಟಿಕೆಟ್ ತೆತ್ತು ಮಜಾ ಮಾಡಲು ಕಾದಿದ್ದರು.

ಆದರೆ, ರೈತಪರ ನಿಲುವು ತೆಗೆದುಕೊಂಡ ಮುಖ್ಯಮಂತ್ರಿ ಸದಾನಂದ ಗೌಡ, ಹಬ್ಬಕ್ಕೆ ನಿಷೇಧ ಹೇರಿದ್ದಾರೆ.

English summary
Karnataka Chief Minister, Sadananda Gowda made many people upset after cancelling the La Tomatina festival which was scheduled to have occurred at the Palace Ground in Bangalore on Sunday, Sept 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X