ಬೊಮ್ಮಾಯಿ ಬಾಯಿಂದ ಭದ್ರಾ ಭಗವದ್ಗೀತೆ ವಾಚನ
ಯೋಜನೆ ಚರಿತ್ರೆ: ಈ ಯೋಜನೆಯು ಎಸ್.ನಿಜಲಿಂಗಪ್ಪರ ಅಧಿಕಾರಾವಧಿಯಲ್ಲಿ ಆರಂಭವಾಗಿದ್ದರೂ 2003ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರಕಾರದಲ್ಲಿ 2,813 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ ಲಭಿಸಿತು. 2005ರಲ್ಲಿ ಕೆ.ಸಿ.ರೆಡ್ಡಿ ನೇತೃತ್ವದ ಸಮಿತಿಯು ಯೋಜನೆಗೆ 4,150 ಕೋಟಿ ರೂ.ಅಂದಾಜು ವೆಚ್ಚ ತಗಲುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಬೊಮ್ಮಾಯಿ ತಿಳಿಸಿದರು.
ಅನಂತರ ಹಲವಾರು ತಾಂತ್ರಿಕ ಅನುಮೋದನೆ, ಮತ್ತಿತರ ಕಾರ್ಯಗಳು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದು, ರಾಷ್ಟ್ರಪತಿ ಆಡಳಿತ ವೇಳೆ ಯೋಜನೆಯ ಟೆಂಡರ್ನ ಅಂತಿಮ ಹಂತದ ಶಿಫಾರಸುಗಳ ವರದಿ ಸಲ್ಲಿಕೆಯಾಗಿತ್ತು.
ಅದರ ಮುಂದುವರಿದ ಭಾಗವಾಗಿ ಬಿ.ಎಸ್.ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಈ ಯೋಜನೆಯ ಪ್ರಥಮ ಹಾಗೂ ದ್ವಿತೀಯ ಹಂತದ ಒಟ್ಟು 5,985 ಕೋಟಿ ರೂ. ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅಂಗೀಕಾರ ನೀಡಲಾಯಿತು. ಇದರಿಂದ ಯಾವುದೇ ಅಕ್ರಮ ನಡೆದಿಲ್ಲ. ನಿಯಮಾನುಸಾರವಾಗಿ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯ ಪ್ರಥಮ ಹಂತದ ಕಾಮಗಾರಿಯು 3,985 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 2013ರಲ್ಲಿ ಪೂರ್ಣಗೊಳ್ಳಲಿದೆ.
ಈ ಯೋಜನೆ ಪೂರ್ಣಗೊಂಡ ಬಳಿಕ ಚಿತ್ರದುರ್ಗ ಜಿಲ್ಲೆಯ ಸುಮಾರು ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. 50 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಭದ್ರಾ
ಮೇಲ್ದಂಡೆ
ಯೋಜನೆಯ
ಎರಡನೆ
ಹಂತದ
ಕಾಮಗಾರಿಯು
2
ಸಾವಿರ
ಕೋಟಿ
ರೂ.ವೆಚ್ಚದಲ್ಲಿ
ಕೈಗೆತ್ತಿಕೊಳ್ಳಲಿದ್ದು,
2013-14ರ
ವೇಳೆಗೆ
ಪೂರ್ಣಗೊಳಿಸಲಾಗುವುದು
ಎಂದು
ಸಚಿವ
ಬಸವರಾಜ
ಬೊಮ್ಮಾಯಿ
ವಿಶ್ವಾಸ
ವ್ಯಕ್ತಪಡಿಸಿದರು.