ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರತ್ನಾಕರ ಶೆಟ್ಟಿ ಇನ್ನೂ ಸಿಕ್ಕಿಲ್ಲ; ಶೋಧಕ್ಕೆ ತಂಡ ರಚನೆ

By Srinath
|
Google Oneindia Kannada News

inspector-rathnakar-not-yet-found-team-to-search
ಬೆಂಗಳೂರು, ಸೆ. 11: ಲೋಕಾಯುಕ್ತ ದಾಳಿಯ ವೇಳೆ ಪರಾರಿಯಾಗಿ ತಲೆಮರೆಸಿಕೊಂಡಿರುವ ಅಮೃತಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರತ್ನಾಕರ್ ಶೆಟ್ಟಿ ಮತ್ತು ಕಾನ್ಸ್‌ಟೇಬಲ್ ಸುಹೇಲ್ ಇನ್ನೂ ಪತ್ತೆಯಾಗಿಲ್ಲ.

ಆರೋಪಿಗಳ ಶೋಧಕ್ಕಾಗಿ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹಮದ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರುಗಳಾದ ಅನಿಲ್‌ಕುಮಾರ್ ಹಾಗೂ ರವಿಶಂಕರ್ ತಂಡದಲ್ಲಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಶಿವಾಜಿನಗರದ ಟೈಲರಿಂಗ್ ಅಂಗಡಿಯ ಮಾಲೀಕ ನೂರ್ ಅಹ್ಮದ್ ಎಂಬವರಿಂದ ಐದು ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಲೋಕಾಯುಕ್ತ ಪೊಲೀಸರ ದಾಳಿಯ ಸುಳಿವನ್ನು ಅರಿತು ಠಾಣೆಯಿಂದಲೇ ಪರಾರಿಯಾಗಿದ್ದರು.

ಮೈಸೂರು, ತುಮಕೂರು, ಕೋಲಾರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಶೋಧ ಕಾರ್ಯ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ಆರೋಪಿಗಳ ಸಂಬಂಧಿಕ ರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಆರೋಪಿಗಳ ವಿರುದ್ಧ ಈಗಾಗಲೇ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಇಬ್ಬರನ್ನೂ ಕರ್ತವ್ಯದಿಂದ ಅಮಾನತುಗೊಳಿಸಿ ತಕ್ಷಣ ಆದೇಶ ಹೊರಡಿಸಿದ್ದಾರೆ.

English summary
Police inspector Rathnakar Shetty and a constable who are on the run from the Lokayukta sleuths are yet to surface. In the meanwhile Lokayukta Team lead by DySP Abdul ahammed is after the duo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X