ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೈದರಾಬಾದ್ ತಲುಪಿದ ಸಿಬಿಐ: ಸಂಜೆ4ಕ್ಕೆ ರೆಡ್ಡಿ ಕೋರ್ಟಿಗೆ
ಬಂಧಿತರಿಬ್ಬರನ್ನೂ ಹೈದರಾಬಾದಿನ ಕೋಠಿಯಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ. ಅಲ್ಲಿಂದ ಸಂಜೆ 4 ಗಂಟೆ ವೇಳೆಗೆ ನಾಂಪಲ್ಲಿಯಲ್ಲಿರುವ ಸಿಬಿಐ ಕೋರ್ಟಿನಲ್ಲಿ ಅವರನ್ನು ಹಾಜರುಪಡಿಸಲಾಗುವುದು ಎಂದು ಸಿಬಿಐ ಡಿಐಜಿ ಲಕ್ಷ್ಮಿನಾರಾಯಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಬಲವಾದ ಸಾಕ್ಷ್ಯವಿಲ್ಲದೆ ಸಿಬಿಐ ಯಾರ ಮೇಲೂ ಕ್ರಮ ಜರುಗಿಸದು. ಪ್ರಸ್ತುತ, ತಮ್ಮ ಬಂಧನದಲ್ಲಿರುವ ರೆಡ್ಡಿ ಜೋಡಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆ ಹಿನ್ನೆಲೆಯಲ್ಲಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ' ಎಂದು ಲಕ್ಷ್ಮಿನಾರಾಯಣ ಹೇಳಿದ್ದಾರೆ.
ನ್ಯಾಯಾಲಯದಲ್ಲಿ ಇಬ್ಬರನ್ನೂ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವುದಾಗಿ ಅವರು ತಿಳಿಸಿದ್ದಾರೆ.
Comments
ಸಿಬಿಐ ಜನಾರ್ದನ ರೆಡ್ಡಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಓಬಳಾಪುರಂ ಟಪಾಲ್ ಗಣೇಶ್ janardhana reddy cbi obulapuram illegal mining tapal ganesh resignation
English summary
CBI DIG Lakshminarayana has said that he will produce arrested Janardhana Reddy and Srinivas Reddy in CBI Special Court at Nampalli in Hyderabad at 4pm Sept 5.
Story first published: Tuesday, September 6, 2011, 9:52 [IST]