ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಾರ್ದನ ರೆಡ್ಡಿ ನಿವಾಸದ ಮೇಲೆ ಸಿಬಿಐ ದಾಳಿ, ಬಂಧನ
ಇದೇ ವೇಳೆ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ್ ರೆಡ್ಡಿ ಅವರ ನಿವಾಸದ ಮೇಲೂ ಸಿಬಿಐ ತಂಡ ದಾಳಿ ಮಾಡಿದೆ. ಅವರನ್ನೂ ಬಂಧಿಸಲಾಗಿದೆ. ಓಬಳಾಪುರಂ ಮೈನಿಂಗ್ ಕಂಪನಿ ಅವ್ಯವಹಾರದ ಕುರಿತು ಕಳೆದ ಎರಡು ವರ್ಷಗಳಿಂದ ಆಂಧ್ರಪ್ರದೇಶದ ಹೈಕೋರ್ಟಿನಲ್ಲಿ ವಿಚಾರಣೆ ನಡೆದಿತ್ತು.
ಆದರೆ ಕರ್ನಾಟಕ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವರದಿಯ ಫಲವಾಗಿ ಈ ದಾಳಿ ನಡೆದಿಲ್ಲ ಎಂಬುದು ಗಮನಾರ್ಹ. ಇದೀಗ ಬಂದ ವರ್ತಮಾನದ ಪ್ರಕಾರ ಜನಾರ್ದನ ರೆಡ್ಡಿ ಅವರ ಬೆಂಗಳೂರು ನಿವಾಸದ ( ಯಲಹಂಕದ 'ಪಾರಿಜಾತ' ) ಮೇಲೂ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಮ್ಮ ವರದಿಗಾರರು ಎಸ್ ಎಮ್ ಎಸ್ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಿ.
ಜನಾರ್ದನ ರೆಡ್ಡಿ ಸಿಬಿಐ ಅಕ್ರಮ ಗಣಿಗಾರಿಕೆ ಬಿವಿ ಆಚಾರ್ಯ janardhana reddy bv acharya cbi illegal mining resignation
English summary
CBI Raids Janardhan Reddy house 'Kutira' in Bellary on Monday 6 am (Sept 5) Ex Minister Janardhan Reddy in CBI custody.
Story first published: Monday, September 5, 2011, 10:26 [IST]