ಸುಪಾರಿ ಕೊಟ್ಟು ಹೆತ್ತ ಮಗನನ್ನು ಮುಗಿಸಿದ ತಾಯಿ
ಆದರೆ ಕಾಮಾಂಧ ಕಣ್ಣಿಗೆ ಮಗನೇ ವಿಲನ್ ಆಗಿ ಕಂಡಿದ್ದಾನೆ. ತನ್ನ ವಿವಾಹೇತರ ಸಂಬಂಧದ ರಹಸ್ಯ ತಿಳಿದ ಮಗನನ್ನೇ ಮುಗಿಸಲು ಇಬ್ಬರು ಹಂತಕರಿಗೆ ಸುಪಾರಿ ನೀಡಿದ ಕಿರಾತಕಿ ಮಹಾತಾಯಿ(?)ಯೊಬ್ಬಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಅಮ್ಮನ ಕಾಮಾಂಧ ಬದುಕಿಗೆ ಬಲಿಯಾದ ಮಗನ ಹೆಸರು ಮಂಜೀತ್(22). ಆತನನ್ನು ದೆಹಲಿಯ ನಜಾಫ್ ಗರ್ ನಿವಾಸದಿಂದ ಕಿಡ್ನಾಪ್ ಮಾಡಿದ ಸುಪಾರಿ ಹಂತಕರು ಪಂಜಾಬಿನ ಸಂಗೂರ್ ಜಿಲ್ಲೆಯಲ್ಲಿ ಕಳೆದ ಜನವರಿಯಲ್ಲಿ ಕೊಲೆ ಮಾಡಿದ್ದರು.
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹಂತಕರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆಗ ಈ ಘಟನೆಯೂ ಬೆಳಕಿಗೆ ಬಂದಿದೆ. ಆ ಮಹಾತಾಯಿಯ ಹೆಸರು ರಾಜೀಸ್ ಅಲಿಯಾಸ್ ಲಾಲ್ಲಿ(45). ಆಕೆಯನ್ನು ಆಗಸ್ಟ್ 31ಕ್ಕೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
"ತಾಯಿಯ ವಿವಾಹೇತರ ಸಂಬಂಧ ಮಗನಿಗೆ ತಿಳಿದಾಗ, ಇದನ್ನು ಮುಂದುವರೆಸದಂತೆ ಎಚ್ಚರಿಸಿದ್ದ. ಅದೇ ಆತನ ಪ್ರಾಣಕ್ಕೆ ಮುಳುವಾಯಿತು. ಮಗನ ವಿರೋಧ ಮತ್ತು ಅಪಾದನೆಯಿಂದ ರೊಚ್ಚಿಗೆದ್ದ ಈಕೆ ಕಿರಾತಕಿಯಾಗಿ ಹಂತಕರಿಗೆ 2 ಲಕ್ಷ ರು. ನೀಡಿ ಮಗನನ್ನೇ ಮುಗಿಸಿದಳು" ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಸುಪಾರಿ ಹಂತಕರನ್ನು ಉಮೇಶ್ ಅಲಿಯಾಸ್ ಮೈಕಲ್(32) ಮತ್ತು ಮಹೀಂದರ್ ಅಲಿಯಾಸ್ ಮೊನೊ(22) ಎಂದು ಗುರುತಿಸಲಾಗಿದೆ.