ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಮಠ, ಸ್ವಾಮೀಜಿಗಳಿಗೆ ಶಿಕ್ಷೆ, ಜನ ಲೋಕಪಾಲಕ್ಕೆ ಇರ್ಲಿ

By Mahesh
|
Google Oneindia Kannada News

Kodihalli Chandrashekar
ಬೆಂಗಳೂರು, ಆ.25: ಜನ ಲೋಕಪಾಲ ಮಸೂದೆ ಅಡಿ ಮಠ, ಮಂದಿರಗಳನ್ನು ತರಬೇಕೆಂದು ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಅಣ್ಣಾ ಹಜಾರೆಯ ಹೋರಾಟ ಬೆಂಬಲಿಸಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಮಠ-ಮಂದಿರಗಳಲ್ಲಿ ಭ್ರಷ್ಟಾಚಾರದ ಹಣ ತುಂಬಿ ತುಳುಕುತ್ತಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಧಾರ್ಮಿಕ ಸಂಸ್ಥೆಗಳನ್ನೂ ಲೋಕಪಾಲ ಕಾಯ್ದೆಯಡಿ ತರಬೇಕು.

ಎನ್‌ಜಿಓ ಗಳಿಗೂ ಶಿಕ್ಷೆಯಾಗಲಿ : ಇದರ ಜೊತೆಗೆ ಕೆಲ ಕಾರ್ಪೊರೇಟ್ ವಲಯ ದಿಂದಾಗಿ ರೈತರು ಬದುಕಲು ಸಾಧ್ಯವಾಗುತ್ತಿಲ್ಲ. ಆದುದ ರಿಂದ ಅವರನ್ನೂ ಹಾಗೂ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ)ಗಳನ್ನು ಲೋಕಪಾಲ ಮಸೂದೆ ಯಡಿ ತರಬೇಕೆಂದು ಕೋಡಿಹಳ್ಳಿ ಆಗ್ರಹಿಸಿದರು.

ಪಂಚಾಯತ್‌ನಿಂದ ಹಿಡಿದು ಸಂಸತ್ತಿನವರೆಗಿನ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಕ ಭ್ರಷ್ಟಾಚಾರ ತುಂಬಿತುಳುಕುತ್ತಿವೆ. ಇದನ್ನು ತಡೆಗಟ್ಟಬೇಕಾದರೆ ನ್ಯಾಯಾಧೀಶರು ಹಾಗೂ ಪ್ರಧಾನಿಯನ್ನು ಈ ಮಸೂದೆಯಡಿ ತರಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಭ್ರಷ್ಟಾಚಾರದೊಂದಿಗೆ ಮಾಧ್ಯಮಗಳೂ ಕೂಡಾ ಸಾಥ್ ನೀಡುತ್ತಿವೆ. ಒಂದೊಂದು ಮಾಧ್ಯಮಗಳು ಒಬ್ಬೊಬ್ಬ ರಾಜಕಾರಣಿಗಳಿಗೆ ಸಾಥ್ ನೀಡುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿವೆ. ಇನ್ನಾದರೂ ಮಾಧ್ಯಮಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

English summary
Karnataka Raitha Sangha president Kodihalli Chandrashekar has urged Jan Lokpal Bill should include Seers, mutts and Ashram. Seers and Ashram are the root of corruption and all illegal money will be stored by politicians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X