ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯರ ದರ್ಶನ ಮಾಡಿದ ಯಡ್ಡಿ 'ನಾನೇ ಮುಂದಿನ ಸಿಎಂ' ಅಂದ್ರು

|
Google Oneindia Kannada News

bsy-mantralayam-darshan-vows-back-in-power
ಮಂತ್ರಾಲಯ, ಆಗಸ್ಟ್ 25: 'ರಾಯರೇ! ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಅವಧಿಯಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದೇನೆ. ನನಗೆ ಗುರು ರಾಘವೇಂದ್ರರ ಆಶೀರ್ವಾದವಿದೆ. ಮುಂದಿನ ದಿನದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ನಾನೇ' ಎಂದಿದ್ದಾರೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ.

ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಬುಧವಾರ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಂತರ ಮಾತನಾಡುತ್ತಾ ಯಡಿಯೂರಪ್ಪ, 'ನಾನು ರಾಯರ ಭಕ್ತ. ರಾಯರು ನಂಬಿದವರನ್ನು ಕೈ ಬಿಡುವುದಿಲ್ಲ. ವರಿಷ್ಟರು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿ ರಾಜೀನಾಮೆ ನೀಡಿದ್ದೇನೆ.

ಗುರು ರಾಘವೇಂದ್ರ ದಯೆಯಿಂದ ನನ್ನ ಮೇಲಿರುವ ಆರೋಪದಿಂದ ಮುಕ್ತನಾಗಿ, ವಿರೋಧ ಪಕ್ಷದವರಿಗೆ ಸರಿಯಾದ ಪಾಠ ಕಲಿಸುತ್ತೇನೆ' ಎಂದು ವಿಶ್ವಾಸದ ದಾಟಿಯಲ್ಲಿ ಹೇಳಿದ್ದಾರೆ.

ಒಟ್ಟಿನಲ್ಲಿ ಅಧಿಕಾರ ಕಳಕೊಂಡ ನಂತರ ಯಡಿಯೂರಪ್ಪ ಆರು ತಿಂಗಳಲ್ಲಿ ನಾನೇ ಸಿಎಂ ಆಗ್ತೀನಿ, ನಾನೇ ಮುಂದಿನ ಸಿಎಂ ಇದರಲ್ಲಿ ಅನುಮಾನ ಬೇಡ ಎನ್ನುವ ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಮುಂದುವರಿಸಿ ಸದಾನಂದರ ಆನಂದ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.

English summary
Karnataka ex Chief Minister B.S. Yeddyurappa visited Mantralayam on Aug 24. After taking Sree Raghavendra Guru darshan ha vowed to back in power as Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X