ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಶಾಸಕರನ್ನು ಇಂಡೋನೇಷ್ಯಾಗೆ ಹೊತ್ತೊಯ್ದ ರೆಡ್ಡಿಗಳು

By Srinath
|
Google Oneindia Kannada News

ಬಳ್ಳಾರಿ, ಆಗಸ್ಟ್ 24: ಅಧಿಕಾರದಲ್ಲಿ ಇಲ್ಲದಿದ್ದರೆ ತಮ್ಮ ಪಾಡು ಏನಾಗಬಹುದು ಎಂಬುದು ಬಳ್ಳಾರಿಯ ರೆಡ್ಡಿ ಸೋದರರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಸಂಪುಟದಿಂದ ದೂರಚಾಗಿರುವ ರೆಡ್ಡಿ ಸಹೋದರರು, ತಮಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಸರಕಾರವನ್ನು ಬ್ಲಾಕ್‌ಮೇಲ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಮತ್ತು ನೆರೆ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರನ್ನು ರೆಡ್ಡಿ ಸಹೋದರರು ಇಂಡೋನೇಷ್ಯಾಗೆ ಕಳುಹಿಸಿದ್ದಾರೆ. ಒಂದು ತಂಡ ಸೋಮವಾರವೇ ತೆರಳಿದೆ. ಮಂಗಳವಾರ ಕೂಡ ಒಂದು ತಂಡ ಹೋಗಿದೆ ಎಂದು ಗೊತ್ತಾಗಿದೆ. 14 ಮಂದಿ ಶಾಸಕರು ತಮ್ಮ ಬೆಂಬಲಕ್ಕೆ ಇದ್ದು, ತಾವು ಹೇಳಿದವರು ಸಚಿವರಾಗಬೇಕು. ಶ್ರೀರಾಮುಲು ಸೇರಿದಂತೆ ಐದು ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂದು ರೆಡ್ಡಿ ಬಣ ಒತ್ತಡ ಹಾಕಿದೆ ಎಂದು ಗೊತ್ತಾಗಿದೆ.

ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಶಾಸಕರನ್ನು ಸೇರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರೆಲ್ಲ ಒಗ್ಗಟ್ಟಾಗಿದ್ದು, ರೆಡ್ಡಿ ಬಣದ ಜತೆ ಇದ್ದಾರೆ. ಅವರಲ್ಲೂ ಕೆಲವರನ್ನು ಇಂಡೋನೇಷ್ಯಾಕ್ಕೆ ಕರೆದೊಯ್ಯಲಾಗಿದೆ.

ಅಲ್ಲದೆ, ಇತರ ಶಾಸಕರನ್ನು ಕೂಡಾ ತಮ್ಮತ್ತ ಸೆಳೆಯುವ ಯತ್ನವನ್ನು ಕೂಡಾ ಅವರು ನಡೆಸುತ್ತಿದ್ದಾರೆನ್ನಲಾಗಿದೆ. ಮುಂದಿನ ಮೂರನೆ ಹಂತದ ಸಂಪುಟ ವಿಸ್ತರಣೆಯ ವೇಳೆ ತಮಗೆ ಕನಿಷ್ಠ ನಾಲ್ಕು ಸ್ಥಾನಗಳನ್ನು ನೀಡುವಂತೆ ರೆಡ್ಡಿ ಸಹೋದರರು ಪಟ್ಟು ಹಿಡಿದಿದ್ದಾರೆನ್ನಲಾಗುತ್ತಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಉತ್ತರವೇನು, ಮುಂದಿನ ಭಾಗದಲ್ಲಿ ನೋಡಿ...

English summary
Its reported that Reddy brothers high jacked some BJP MLAs to Indonesia. Thus, Bellary Reddy brothers yearning for cabinet birth blackmail BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X