ಬಿಜೆಪಿ ಶಾಸಕರನ್ನು ಇಂಡೋನೇಷ್ಯಾಗೆ ಹೊತ್ತೊಯ್ದ ರೆಡ್ಡಿಗಳು
ಬಳ್ಳಾರಿ ಮತ್ತು ನೆರೆ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರನ್ನು ರೆಡ್ಡಿ ಸಹೋದರರು ಇಂಡೋನೇಷ್ಯಾಗೆ ಕಳುಹಿಸಿದ್ದಾರೆ. ಒಂದು ತಂಡ ಸೋಮವಾರವೇ ತೆರಳಿದೆ. ಮಂಗಳವಾರ ಕೂಡ ಒಂದು ತಂಡ ಹೋಗಿದೆ ಎಂದು ಗೊತ್ತಾಗಿದೆ. 14 ಮಂದಿ ಶಾಸಕರು ತಮ್ಮ ಬೆಂಬಲಕ್ಕೆ ಇದ್ದು, ತಾವು ಹೇಳಿದವರು ಸಚಿವರಾಗಬೇಕು. ಶ್ರೀರಾಮುಲು ಸೇರಿದಂತೆ ಐದು ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂದು ರೆಡ್ಡಿ ಬಣ ಒತ್ತಡ ಹಾಕಿದೆ ಎಂದು ಗೊತ್ತಾಗಿದೆ.
ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಶಾಸಕರನ್ನು ಸೇರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರೆಲ್ಲ ಒಗ್ಗಟ್ಟಾಗಿದ್ದು, ರೆಡ್ಡಿ ಬಣದ ಜತೆ ಇದ್ದಾರೆ. ಅವರಲ್ಲೂ ಕೆಲವರನ್ನು ಇಂಡೋನೇಷ್ಯಾಕ್ಕೆ ಕರೆದೊಯ್ಯಲಾಗಿದೆ.
ಅಲ್ಲದೆ, ಇತರ ಶಾಸಕರನ್ನು ಕೂಡಾ ತಮ್ಮತ್ತ ಸೆಳೆಯುವ ಯತ್ನವನ್ನು ಕೂಡಾ ಅವರು ನಡೆಸುತ್ತಿದ್ದಾರೆನ್ನಲಾಗಿದೆ. ಮುಂದಿನ ಮೂರನೆ ಹಂತದ ಸಂಪುಟ ವಿಸ್ತರಣೆಯ ವೇಳೆ ತಮಗೆ ಕನಿಷ್ಠ ನಾಲ್ಕು ಸ್ಥಾನಗಳನ್ನು ನೀಡುವಂತೆ ರೆಡ್ಡಿ ಸಹೋದರರು ಪಟ್ಟು ಹಿಡಿದಿದ್ದಾರೆನ್ನಲಾಗುತ್ತಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಉತ್ತರವೇನು, ಮುಂದಿನ ಭಾಗದಲ್ಲಿ ನೋಡಿ...