ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಧರ್ಮಸ್ಥಳಕ್ಕೆ ಭೇಟಿ

|
Google Oneindia Kannada News

Yadiyurappa Tomorrow Visits to Dharmasthala
ಕಳೆದ ತಿಂಗಳು ರಾಜ್ಯದಲ್ಲಿ ನಡೆದ ಆಣೆ ಪ್ರಮಾಣ ರಾಜಕಾರಣ ನಿಮಗೆ ನೆನಪಿರಬಹುದು. ಇದೀಗ ಬಂದ ಸುದ್ದಿಯ ಪ್ರಕಾರ ನಾಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರಂತೆ. ಅದು ಅವರ ಶ್ರದ್ಧೆಯ ವಿಷಯ ಎಂದು ಬಿಟ್ಟು ಬಿಡಲು ಮನಸ್ಸು ಬಾರದು. ತನ್ನ ಅಧಿಕಾರವಧಿಯಲ್ಲಿ ಏನೆಲ್ಲ ಹರಕೆ ಹೊತ್ತುಕೊಂಡಿದ್ದರೋ... ಯಾರಿಗೆ ಗೊತ್ತು!

ಆದರೆ ಅವರ ನಾಳಿನ ಭೇಟಿಗೆ ವಿಶೇಷ ಅರ್ಥವೇನೂ ಇಲ್ಲ. ಆದರೆ ಇದು ಕುಮಾರಸ್ವಾಮಿಯೊಂದಿಗಿನ ಆಣೆ-ಪ್ರಮಾಣ ಜಗಳದ ನಂತರ ಅವರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾ ಸಲ. ಹಾಗಾಗಿ ಇಡೀ ರಾಜ್ಯದ ಜನತೆ ಕಣ್ಣು, ಬಾಯಿ ಬಿಟ್ಟುಕೊಂಡು ಯಡಿಯೂರಪ್ಪ ಹಾಗೂ ಧರ್ಮಸ್ಥಳ ಎರಡನ್ನೂ ನಾಳೆ ಗಮನಿಸಲಿರುವುದು ಗ್ಯಾರಂಟಿ.

ರಾಜಕಾರಣಿಗಳು ಭಕ್ತರಾಗಿ ಹೋದರೂ ಈಗ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಅದರಲ್ಲೂ ಈಗ ಮಾಜಿ ಸಿಎಂ ಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಹೋಗುತ್ತಾರೆಂದರೆ ಖುದ್ದು ಮಂಜುನಾಥಸ್ವಾಮಿಗೆ ಕುತೂಹಲ ಕೆರಳಿದರೆ ಆಶ್ಚರ್ಯವಿಲ್ಲ. ಮೂಲಗಳ ಪ್ರಕಾರ ಅವರ ನಾಳೆಯ ಭೇಟಿಯ ಹಿಂದೆ ಒಂದಿಷ್ಟು ಧಾರ್ಮಿಕ ಭಯ ಇರಬಹುದು ಅಂತಾರೆ.

ಅವರ ನಾಳಿನ ಈ ಬೇಟಿ ಯಾಕಾಗಿ ಎಂಬುದು ಇಂದು ಅಪ್ರಸ್ತುತ. ಏಕೆಂದರೆ ಯಡಿಯೂರಪ್ಪ "ಹೇಳುವುದು ಒಂದು, ಮಾಡುವುದು ಇನ್ನೊಂದು..." ಎಂಬ ಗಾದೆ ಸದ್ಯಕ್ಕೆ ಚಾಲ್ತಿಯಲ್ಲಿದೆ. ರಾಜ್ಯಕ್ಕೆ ಶುಭವಾಗಲಿ ಎಂದು ಪ್ರಾರ್ಥಿಸುತ್ತಾರೋ.. ಅಥವಾ ಆದಷ್ಟು ಬೇಗ ಸಿಎಂ ಪಟ್ಟ ಮತ್ತೆ ಸಿಗಲಿ ಎಂದು ಬೇಡಿಕೊಳ್ಳುತ್ತಾರೋ..

English summary
Former CM yadiyurappa planned to visit Dharmasthala, tomorrow. It became very crucious matter to the people of the state. let us wait and see why he is going to there!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X