ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.ಯಾಕ್ರೋ ಚುಡಾಯಿಸ್ತೀರಾ? ಎಂದ ಮರುಕ್ಷಣವೇ ಮರ್ಡರ್

By Mahesh
|
Google Oneindia Kannada News

Youth beaten to death Panipat
ಹರ್ಯಾಣ, ಆ.10: ತನ್ನ ಸೋದರಿಯನ್ನು ಕೆಣಕಿದ ಪುಂಡರನ್ನು ಸದೆಬಡೆಯಲು ಹೋದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಪಾಣಿಪಾತ್ ನಲ್ಲಿ ಇತ್ತೀಚೆಗೆ ನಡೆದಿದೆ.

ತನ್ನ ಸೋದರಿಯನ್ನು ಚುಡಾಯಿಸುತ್ತಿದ್ದ ದಿನೇಶ್ ಹಾಗು ಅವರ ಗ್ಯಾಂಗ್ ಗೆ ಪಾಠ ಕಲಿಸುವುದಾಗಿ ಹೊರಟ 22 ವರ್ಷದ ಸೋನು ರಸ್ತೆಯಲ್ಲಿ ಹೆಣವಾಗಿ ಮಲಗಿದ್ದಾನೆ. ಘಟನೆ ನಡೆದು ಎರಡು ಮೂರು ದಿನಗಳಾದರೂ ಪುಂಡರನ್ನು ಹಿಡಿಯಲು ಪೊಲೀಸರು ಮನಸ್ಸು ಮಾಡಿಲ್ಲ.

ಸಾರ್ವಜನಿಕರ ಒತ್ತಾಯದ ಮೇರೆಗೆ ದಿನೇಶ್ ಎಂಬುವವನ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸೋನು ಕುಟುಂಬ ಆರೋಪಿಸಿದೆ.

ಈವ್ ಟೀಸಿಂಗ್ ಕೇಸ್ ದಾಖಲಿಸಲು ಒಪ್ಪದ ಪೊಲೀಸರು ಸೋನು ಕೊಲೆ ನಂತರ ಕೇಸ್ ದಾಖಲಿಸಿದ್ದೇಕೆ ಎಂದು ಸೋನು ಗೆಳೆಯರು ಪ್ರಶ್ನಿಸಿದ್ದಾರೆ. ಸೋನು ದುಡುಕಬಾರದಿತ್ತು.

ದಿನೇಶ್ ಹಾಗೂ ಅವನ ಗ್ಯಾಂಗ್ ಯುವತಿಯರನ್ನು ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು ಪೊಲೀಸರಿಗೆ ಮೊದಲೇ ತಿಳಿದಿತ್ತು. ಪ್ರಭಾವಿ ನಾಯಕರ ಒತ್ತಡದಿಂದ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

English summary
A 22 year old youth Sonu has been beaten to death by assailants in Panipat. Sonu objected to eve teasing of his sister. Police are searching for accused Dinesh and his friends in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X