ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆವರೆಗೂ ಕಾದು ನೋಡಿ ನಿಮಗೆ ಗೊತ್ತಾಗುತ್ತೆ: ಗೌಡ

By Rajendra
|
Google Oneindia Kannada News

Sadanda Gowda
ಬೆಂಗಳೂರು, ಆ.4: ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಗುರುವಾರ (ಆ.4) ಸಂಜೆ ನಡೆಯುವ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭಕ್ಕೆ ಎಲ್ಲರೂ ಬರುತ್ತಾರೆ. ಬೇಕಿದ್ದರೆ ಕಾದು ನೋಡಿ ಎಂದು ವಿಶ್ವಾಸದಿಂದ ಇಂದು ನುಡಿದರು ನಿಯೋಜಿತ ಮುಖ್ಯಮಂತ್ರಿ ಸದಾನಂದಗೌಡ.

ಬೆಂಗಳೂರು ವಿಜಯನಗರಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಶ್ರೀಗಳ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಮಾತನಾಡಿದ ಗೌಡರು, ಸಮಾರಂಭವನ್ನು ಯಾರೂ ಬಹಿಷ್ಕರಿಸುವುದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಮಾಣ ವಚನ ಸಮಾರಂಭದ ಬಹಿಷ್ಕಾರವಂತೂ ಇಲ್ಲವೇ ಇಲ್ಲ ಎಂದರು.

ಆದಿಚುಂಚನಗಿರಿ ಮಠಾಧೀಶ್ವರ ಬಾಲಗಂಗಾಧರ ಸ್ವಾಮಿಜಿಗಳು ಮಾತನಾಡುತ್ತಾ, ಉತ್ತಮ ಆಡಳಿತ ನೀಡಲು ಸದಾನಂದ ಗೌಡರು ಸಮರ್ಥರು. ಅವರ ಆಡಳಿತದ ಅವಧಿಯಲ್ಲಿ ರಾಜ್ಯ ಉತ್ತಮ ಪ್ರಗತಿಯತ್ತ ಮುನ್ನಡೆಯಲಿ ಎಂದು ಅಭಿಪ್ರಾಯಪಟ್ಟರು.

English summary
There is no decedents in BJP. Everyone in the party to participate in oath taking ceremony on Aug 5. One must wait until the evening said the designated chief minister of Karnataka Sadananda Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X