ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜಾತ ಹೆಣ್ಣು ಮಗುವನ್ನು ನೆಲಕ್ಕೆ ಎಸೆದ ನಿರ್ದಯಿ ಅಪ್ಪ!

By Prasad
|
Google Oneindia Kannada News

Father tries to kill newborn (Representative picture)
ಬೆಂಗಳೂರು, ಜು. 26 : ಹತ್ತುದಿನಗಳ ಹಿಂದೆ ತಾನೆ ಜಗತ್ತನ್ನು ನೋಡಿದ ಹೆಣ್ಣು ಮಗುವನ್ನು ತಂದೆಯೆ ನೆಲಕ್ಕೆ ಎಸೆದು ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆ ಬಿಡದಿಯಲ್ಲಿ ನಡೆದಿದೆ. ಅಂಗವಿಕಲವಾಗಿ ಹುಟ್ಟಿದ್ದು ಮತ್ತು ಹೆಣ್ಣಾಗಿದ್ದು ಆ ಮಗುವಿನ ತಪ್ಪೆ? ನಿರ್ದಯಿ ಅಪ್ಪ ಪರಾರಿಯಾಗಿದ್ದು ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ.

ಕೆಂಗೇರಿ ಬಳಿಯ ಕೋಡಿಪಾಳ್ಯದಲ್ಲಿ ಕಿರಾಣಿ ಅಂಗಡಿ ಇಟ್ಟಿರುವ 'ಮಾನಸಿಕ ವಿಕಲ' ಸತೀಶ್ ಗೌಡನೇ ಆರೋಪಿ. ಆತನ ಹೆಂಡತಿ ದಿವ್ಯಲಕ್ಷ್ಮಿ ಹತ್ತುದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆದರೆ, ಸತೀಶನಿಗೆ ಬೇಕಾಗಿದ್ದುದು ಗಂಡುಮಗು.

ಗಂಡು ಮಗುವೇ ಬೇಕೆಂದು ಹೆಂಡತಿಯಿಂದ ವಾಗ್ದಾನ ಪಡೆದಿದ್ದ ಸತೀಶ್ ಗೌಡ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗಲೇ ರಾದ್ಧಾಂತ ಮಾಡಿದ್ದ. ನಂತರ ದಿವ್ಯಲಕ್ಷ್ಮಿ ಮನೆಗೆ ಮರಳಿದಾಗ, ಹೆಂಡತಿಯಿಂದ ಮಗುವನ್ನು ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾನೆ.

ಮಗುವನ್ನು ಇಂದಿರಾ ಗಾಂಧಿ ಸ್ಮಾರಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನ್ಮರಣದ ಮಧ್ಯೆ ಮಗು ತುಯ್ದಾಡುತ್ತಿದೆ. ಅಪ್ಪ ಪರಾರಿಯಾಗಿದ್ದಾನೆ. ಅಮ್ಮ ಕಂಬನಿ ಸುರಿಸುತ್ತ ಮಗುವಿನ ಜೀವಕ್ಕಾಗಿ ಪ್ರಾರ್ಥಿಸುತ್ತಿದ್ದಾಳೆ. ಸತೀಶನ ವಿರುದ್ಧ ಕೊಲೆಗೆ ಯತ್ನಿಸಿದ ಆರೋಪ ಹೊರಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.

English summary
Father ties to kill newborn girl baby as the female baby was born with deformities. The incident happened in Bidadi near Bangalore city. The killer father is absconding and female baby is admitted to Indira Gandhi Memorial Govt hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X