ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡುಗಡ್ಡೆಯಂತಾಗಿರುವ ನೀಲಕಂಠರಾಯ ಗಡ್ಡಿ ಗ್ರಾಮ

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Nilkantharayana Gaddi village in Yadgir district
ಯಾದಗಿರಿ, ಜು. 25 : ನಾರಾಯಣಪೂರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟದ್ದರ ಪರಿಣಾಮ ಜಿಲ್ಲೆಯ ಸುರಪೂರ ತಾಲೂಕಿನ ನಿಲಕಂಠರಾಯನ ಗಡ್ಡಿಯ ಗ್ರಾಮ ನಡುಗಡ್ಡೆಯಂತಾಗಿ ಹೊರಜಗತ್ತಿನೊಂದಿಗೆ ಸಂಪೂರ್ಣ ಕಡಿತಗೊಂಡಿದೆ.

ಅಭಿವೃದ್ಧಿ ಅಭಿವದ್ಧಿ ಎಂದು ಸರಕಾರ ಬೊಂಬಡಾ ಹೊಡೆಯುತ್ತಿರುವ ಸಂದರ್ಭದಲ್ಲಿ ಈ ಗ್ರಾಮಕ್ಕೆ ಇಲ್ಲಿಯವರೆಗೂ ರಸ್ತೆ ಹಾಗೂ ಸೇತುವೆ ಕಲ್ಪಿಸಲಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿದೆ, ಮೊಬೈಲ್‌ಗಳು ನಾಟ್ ರಿಚೇಬಲ್ ಆಗಿವೆ.

ಈ ಗ್ರಾಮಸ್ಥರು ಸೀಟಿ ಕೇಕೆಗಳನ್ನು ಹೊಡೆಯುತ್ತ, ಹಾಗೂ ಬೆಂಕಿ ಹಚ್ಚಿದ ಜಾಗದಲ್ಲಿ ನಾವಿದ್ದೇವೆ, ನಮ್ಮನ್ನು ಇಲ್ಲಿಂದ ರಕ್ಷಿಸಿ ಎಂದು ದೂರದ ನದಿ ತೀರದ ದಡದಿಂದ ಕರೆಯುತ್ತಿದ್ದಾರೆ. ಸರಕಾರವೇ ಮುಳುಗುವ ಹಂತದಲ್ಲಿರುವಾಗ ಇವರ ಕೂಗನ್ನು ಕೇಳುವವರಾದರೂ ಯಾರು?

ಈ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, 250 ಜನಸಂಖ್ಯೆ ಇದೆ. ಸಮಾರು ವರ್ಷಗಳಿಂದ ಈ ರೀತಿ ನಡುಗಡ್ಡೆಯಾಗಿಯೇ ಉಳಿದಿದೆ. ಜನರು ಆಚೆಗೆ ಬರಬೇಕಾದರೆ ಈಜಿಕೊಂಡು ಇನ್ನೊಂದು ದಡಕ್ಕೆ ಬರುತ್ತಾರೆ. 1ರಿಂದ 2 ತಂಗಳಿಗಾಗೂವಷ್ಟು ಮನೆಗೆ ಬೇಕಾದ ಸಾಮಾನುಗಳನ್ನು ಸಮೀಪದ ಕಕ್ಕೆರಾ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ.

ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು ಹರಿದು ಬಿಟ್ಟ ಪರಿಣಾಮ ಈ ಗ್ರಾಮಸ್ಥರು 3 ದಿನಗಳಿಂದ ಹೊರ ಪ್ರಪಂಚದ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಒಟ್ಟಾರೆಯಾಗಿ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಿಲಕಂಠರಾಯನ ಗಡ್ಡಿಯ ಗ್ರಾಮಸ್ಥರೂ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಅದ್ಯಾವಾಗ ಈ ಗ್ರಾಮಸ್ಥರನ್ನು ರಕ್ಷಿಸುತ್ತಾರೂ ಎನ್ನುವುದನ್ನು ನಾವು ಕಾದು ನೋಡಬೇಕಿದೆ.

English summary
Nilkantharayana Gaddi village in Yadgir district is completely cut from the outer world as the village has become a island and Krishna river has pushed the villagers to the corner. No bridge no road, no electricity and no mobile connection. Still the representatives settled in Bangalore have not shown any mercy to rescue these people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X