ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶ್ ಕಲ್ಮಾಡಿ ಸ್ಮರಣ ಶಕ್ತಿ ಢಮಾರ್, ಕೇಸ್ ಗತಿ ಅಷ್ಟೇ!

By Mahesh
|
Google Oneindia Kannada News

Suresh Kalmadi
ನವದೆಹಲಿ ಜು. 25: ಬಹುಕೋಟಿ ಕಾಮನ್ವೆಲ್ತ್ ಕ್ರೀಡಾಕೂಟ ಅವ್ಯವಹಾರದ ಪ್ರಮುಖ ಆರೋಪಿ ಸುರೇಶ್ ಕಲ್ಮಾಡಿಗೆ ಮರೆವಿನ ರೋಗ ಬಡಿದಿದೆ.

ಎರಡು ತಿಂಗಳಿನಿಂದ ತಿಹಾರ್ ಜೈಲಿನಲ್ಲಿರುವ ಪುಣೆ ಮಾಜಿ ಸಂಸದ ಮತ್ತು ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಬುದ್ಧಿಮಾಂದ್ಯತೆ ರೋಗದಿಂದ ಬಳಲುತ್ತಿರುವುದು ಖಚಿತವಾಗಿದೆ.

66 ವರ್ಷದ ಸುರೇಶ್ ಕಲ್ಮಾಡಿ ಅವರಿಗೆ ಮರೆವಿನ ರೋಗ ಪ್ರಾಥಮಿಕ ಹಂತದಲ್ಲಿದ್ದು, ಮುಂದೆ ಅವರು ತಮ್ಮ ಸ್ಮರಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ವ್ಯಕ್ತಿತ್ವ ಕೂಡಾ ಆಗಾಗ ಬದಲಾಗುತ್ತಿದೆ.

ಕಲ್ಮಾಡಿ ಅವರ ಈ ರೋಗ ಕಾಮನ್ ವೆಲ್ತ್ ಹಗರಣದ ವಿಚಾರಣೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನಾರಾಯಣ್ ಜಯಪ್ರಕಾಶ್ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಕಲ್ಮಾಡಿಯ ವೈದ್ಯಕೀಯ ಪರೀಕ್ಷಾ ವರದಿಗಳು ಅವರಿಗೆ ಡಿಮ್ನೀಷಿಯಾ ಆಗಿದೆ ಎಂದು ಸೂಚಿಸುತ್ತಿದೆ. ಇದು ನಿಧಾನವಾಗಿ ವ್ಯಕ್ತಿಯ ಮೆದುಳಿನ ಕಾರ್ಯವನ್ನೇ ಬದಲಿಸುತ್ತದೆ ಎಂದು ತಿಹಾರ್ ಜೈಲಿನ ಡಿಐಜಿ ಆರ್.ಎನ್. ಶರ್ಮ ಹೇಳಿದ್ದಾರೆ.

ಈ ಮಧ್ಯೆ ಕಲ್ಮಾಡಿ ಅವರಿಗೆ ಕಳೆದ 4-5 ವರ್ಷಗಳಿಂದ ಈ ಖಾಯಿಲೆಯಿಂದ ಬಳಲುತ್ತಿದ್ದು, ನಾವು ಜೈಲು ಮತ್ತು ತನಿಖಾ ಸಂಸ್ಥೆಗಳಿಗೆ ತಿಳಿಸಿದ್ದೆವು ಎಂದು ಕಲ್ಮಾಡಿ ಪರ ವಕೀಲ ಹಿತೇಶ್ ಜೈನ್ ಹೇಳಿದ್ದಾರೆ.

English summary
The 66-year-old Suresh Kalmadi is suffering from dementia(related memory loss) and he was taken to Lok Narayan Jai Prakash Hospital. Kalmadi lodged in Tihar Jail for over two months and he is accused in multi crore CWG scam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X