ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿನಂಗಡಿ ಮೃತ ಉದ್ಯಮಿ ಕಿಸೆಯಲ್ಲಿ ಜೀ ಕನ್ನಡ ಐಡಿ?

By Mahesh
|
Google Oneindia Kannada News

Sahul Hameed death mystery, Uppinangady
ಪುತ್ತೂರು ಜು10 : ಉಪ್ಪಿನಂಗಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸಾಹುಲ್ ಹಮೀದ್ ಬೈಕ್ ಅಪಘಾತದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ. ಆದರೆ, ಈತನನ್ನು ಕೊಲೆಗೈದು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅಪಘಾತ ಪ್ರಕರಣ ಎಂದು ದಾಖಲಿಸಿಕೊಂಡ ದಕ್ಷಿಣ ಕನ್ನಡ ಪೊಲೀಸರು, ಸಾಹುಲ್ ಶವದ ಕಿಸೆಯಲ್ಲಿ ಜೀ ಕನ್ನಡ ಐಡಿ ಕಾರ್ಡ್ ಏಕೆ ಇತ್ತು ಎಂದು ಪತ್ತೆ ಹಚ್ಚುತ್ತಿದ್ದಾರೆ.

ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಸಮೇತ ಸಾಹುಲ್ (36) ನೆಲೆಸಿದ್ದ. ಬೆಂಗಳೂರು, ಮೈಸೂರು, ಮುಂಬೈ ಎಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸದಾ ನಿರತನಾಗಿರುತ್ತಿದ್ದ. ಮನೆಗೆ ಬರುತ್ತಿದ್ದದ್ದೆ ಕಮ್ಮಿ. ಜು 8ರಂದು ಉಪ್ಪಿನಗಂಡಿಯಲ್ಲಿರುವ ತಾಯಿ ಮನೆಗೆ ತೆರಲಿ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಪುತ್ತೂರಿನ ಹೊರ ವಲಯದಲ್ಲಿ ಬೈಕ್ (KA-21-K-7691)ಅಪಘಾತಗೊಂಡು ಸಾಹುಲ್ ಮೃತಪಟ್ಟಿದ್ದಾನೆ.

ಸಾಹುಲ್ ಅಡ್ಡಾದಿಡ್ಡಿ ಗಾಡಿ ಓಡಿಸಿ ಅಪಘಾತ ಮಾಡಿಕೊಂಡಿರುವ ಸಾಧ್ಯತೆ ಕಮ್ಮಿ. ಎಂದು ಬೈಕ್ ಆ ರೀತಿ ಓಡಿಸಿಲ್ಲ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಮರಕ್ಕೆ ಬೈಕ್ ಗುದ್ದಿದ್ದರಿಂದ ಸಾಹುಲ್ ಸಾವು ಸಂಭವಿಸಿದೆ ಎನ್ನಲಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ಸಾಹುಲ್ ಜೇಬಿನಲ್ಲಿ ಜೀ ಕನ್ನಡ ವಾಹಿನಿ ವರದಿಗಾರ ಪುತ್ತೂರು ಎಂಬ ಐಡೆಂಡೆಟಿ ಕಾರ್ಡ್ ಸಿಕ್ಕಿದೆ. ಇದು ಯಾಕೆ ಸಾಹುಲ್ ಬಳಿ ಇತ್ತು? ಅಥವಾ ಪುತ್ತೂರು ವರದಿಗಾರನನ್ನು ಸಾಹುಲ್ ಭೇಟಿ ಮಾಡಿದ್ದರೆ ಎಂಬುದು ಸ್ಪಷ್ಟಗೊಂಡಿಲ್ಲ.

English summary
Sahul Hameed(36) of Kasba village died on spot in a fatal road accident on Jun 8. Dakshina Kannada police recovered Zee Kannada TV reporter id card on the spot. Sahul's death was a real estate dealer and locals suspect he has been killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X