ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪ್ಪಿನಂಗಡಿ ಮೃತ ಉದ್ಯಮಿ ಕಿಸೆಯಲ್ಲಿ ಜೀ ಕನ್ನಡ ಐಡಿ?
ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಸಮೇತ ಸಾಹುಲ್ (36) ನೆಲೆಸಿದ್ದ. ಬೆಂಗಳೂರು, ಮೈಸೂರು, ಮುಂಬೈ ಎಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸದಾ ನಿರತನಾಗಿರುತ್ತಿದ್ದ. ಮನೆಗೆ ಬರುತ್ತಿದ್ದದ್ದೆ ಕಮ್ಮಿ. ಜು 8ರಂದು ಉಪ್ಪಿನಗಂಡಿಯಲ್ಲಿರುವ ತಾಯಿ ಮನೆಗೆ ತೆರಲಿ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಪುತ್ತೂರಿನ ಹೊರ ವಲಯದಲ್ಲಿ ಬೈಕ್ (KA-21-K-7691)ಅಪಘಾತಗೊಂಡು ಸಾಹುಲ್ ಮೃತಪಟ್ಟಿದ್ದಾನೆ.
ಸಾಹುಲ್ ಅಡ್ಡಾದಿಡ್ಡಿ ಗಾಡಿ ಓಡಿಸಿ ಅಪಘಾತ ಮಾಡಿಕೊಂಡಿರುವ ಸಾಧ್ಯತೆ ಕಮ್ಮಿ. ಎಂದು ಬೈಕ್ ಆ ರೀತಿ ಓಡಿಸಿಲ್ಲ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಮರಕ್ಕೆ ಬೈಕ್ ಗುದ್ದಿದ್ದರಿಂದ ಸಾಹುಲ್ ಸಾವು ಸಂಭವಿಸಿದೆ ಎನ್ನಲಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ಸಾಹುಲ್ ಜೇಬಿನಲ್ಲಿ ಜೀ ಕನ್ನಡ ವಾಹಿನಿ ವರದಿಗಾರ ಪುತ್ತೂರು ಎಂಬ ಐಡೆಂಡೆಟಿ ಕಾರ್ಡ್ ಸಿಕ್ಕಿದೆ. ಇದು ಯಾಕೆ ಸಾಹುಲ್ ಬಳಿ ಇತ್ತು? ಅಥವಾ ಪುತ್ತೂರು ವರದಿಗಾರನನ್ನು ಸಾಹುಲ್ ಭೇಟಿ ಮಾಡಿದ್ದರೆ ಎಂಬುದು ಸ್ಪಷ್ಟಗೊಂಡಿಲ್ಲ.
ಪುತ್ತೂರು ಕೊಲೆ ಅಪಘಾತ ದಕ್ಷಿಣ ಕನ್ನಡ ಜೀ ಕನ್ನಡ ರಿಯಲ್ ಎಸ್ಟೇಟ್ ಜಿಲ್ಲಾಸುದ್ದಿ murder dakshina kannada zee kannada real estate district news accident
English summary
Sahul Hameed(36) of Kasba village died on spot in a fatal road accident on Jun 8. Dakshina Kannada police recovered Zee Kannada TV reporter id card on the spot. Sahul's death was a real estate dealer and locals suspect he has been killed.
Story first published: Sunday, July 10, 2011, 15:15 [IST]