ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಟ್ಟಾಗೆ 87 ಕೋಟಿ ರು. ಲಂಚ: ಲೋಕಾಯುಕ್ತ ಆರೋಪ
'ಇಟಾಸ್ಕಾ ಸಾಪ್ಟ್ ವೇರ್ ಡೆವಲಪ್ ಮೇಂಟ್ ಕಂಪನಿ'ಗೆ ಕೆಐಎಡಿಬಿ ಮೂಲಕ ಅಕ್ರಮವಾಗಿ 325 ಎಕರೆ ಭೂಮಿ ಮಂಜೂರು ಮಾಡಿರುವುದಕ್ಕೆ ಪ್ರತಿಯಾಗಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡ ಹಾಗೂ ಕಟ್ಟಾ ಜಗದೀಶ್ ಅವರು 87 ಕೋಟಿ ರು. ಲಂಚ ಪಡೆದಿರುವುದು. ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಮಾಜಿ ಸಚಿವರೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದ ಕಟಕಟೆಗೆ ಬಂದು ನಿಂತಂತಾಗಿದೆ.
ಆರೋಪಪಟ್ಟಿಯನ್ನು ಸ್ವೀಕರಿಸಿರುವ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ಅವರು 19 ರಿಂದ ವಿಚಾರಣೆ ಪ್ರಾರಂಭ ಎಂದು ಹೇಳಿ ಎಲ್ಲ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡಿ, ಜುಲೈ 19ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಈಗಾಗಲೇ ಭ್ರಷ್ಟಾಚಾರದಲ್ಲಿ ನಂ.1 ಪಟ್ಟ ಗಿಟ್ಟಿಸಿರುವ ರಾಜ್ಯದಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಭ್ರಷ್ಟಾಚಾರ. ಜನಸಾಮಾನ್ಯರು ಇದರ ಕರಿನೆರಳಿನಲ್ಲೆ ಬದುಕಬೇಕಾದ ದುಸ್ಥಿತಿಗೆ ಏನನ್ನಬೇಕು?
Comments
ಕಟ್ಟಾ ಸುಬ್ರಮಣ್ಯ ನಾಯ್ಡು ಕಟ್ಟಾ ಜಗದೀಶ್ ಲೋಕಾಯುಕ್ತ ಪೊಲೀಸ್ ಲಂಚ katta subramanya naidu katta jagadish lokayuktha police bribe
English summary
Lokayuktha Police has submitted more than 25,000 pages charge sheet in bribe case of Rs. 87 crores, against former minister katta subramanya naidu and his son katta jagadish. Justice Mr. N.K. Sidhindra has told that the inquiry will be start from 19th of July.
Story first published: Saturday, July 9, 2011, 13:13 [IST]