ಹಳೆಯ ಗಂಡನ ಪಾದವೂ ಗತಿಯಿಲ್ಲದವಳ ದುರಂತ ಕಥೆ
ಇದು ಯಾವುದೇ ಬಾಲಿವುಡ್ ಬ್ಲಾಕ್ ಬಸ್ಟರ್ ಸಿನೆಮಾಗಾಗಿ ಸೃಷ್ಟಿಸಿದ ಕಥೆಯಲ್ಲ. ಪಕ್ಕಾ ಬ್ಲಾಕ್ ಬಸ್ಟರ್ ಸಿನೆಮಾ ಮಾಡಬಹುದಾಗ ಪಕ್ಕಾ ರಿಯಲ್ ಸ್ಟೋರಿ. ಎಲ್ಲಿ ರಾಮ್ ಗೋಪಾಲ್ ವರ್ಮಾ? ಎಲ್ಲಿ ರಿಯಲ್ ಸ್ಟಾರ್ ಉಪೇಂದ್ರ? ನಿಜವಾದ ಕಥೆ ಈ ರೀತಿಯ ತಿರುವು ಮುರುವುಗಳನ್ನು ಪಡೆಯುತ್ತದೆಂದು ಈ ಕಥೆಯ ನಾಯಕ ನಾಯಕಿಯರಾದ ತ್ಯಾಗಿ ಮತ್ತು ಆರತಿ ಖಂಡಿತ ನಿರೀಕ್ಷಿಸಿರಲಿಲ್ಲ.
ಇಬ್ಬರನ್ನೂ ಕೂಡಿಸಿಕೊಂಡು ಮದುವೆ ಕೌನ್ಸೆಲರ್ ಮಾತನಾಡಿದ ನಂತರ, ರಾಖಿಯನ್ನು ಕಟ್ಟಿಸಿಕೊಂಡು ತ್ಯಾಗಿಯಾದ ನಿತೀಶ್ ತ್ಯಾಗಿ 'ತಂಗಿ'ಯಾದ ಆರತಿಯನ್ನು ಮತ್ತೆ ಹೆಂಡತಿಯಾಗಿ ಸ್ವೀಕರಿಸಲು ತಯಾರಿಲ್ಲ. ಅದೇನು ಕಾರಣವೋ ಏನೋ, ತನಗೆ ಪ್ರಾಣಬೆದರಿಕೆಯಿದೆ ಎಂದು ಆರತಿಯ ಹಳೆಯ ಗಂಡ ವಿನೀತ್ ಆಕೆಯನ್ನು ಸ್ವೀಕರಿಸಲು ಒಪ್ಪುತ್ತಿಲ್ಲ.
ಹಳೆಯ ಗಂಡ ಪಾದವೂ ಗತಿಯಿಲ್ಲ, ಅಣ್ಣನಾದ ಎರಡನೆಯ ಗಂಡನ ಪಾದವೂ ಗತಿಯಿಲ್ಲ ಎಂಬಂತಹ ತ್ರಿಶಂಕು ಸ್ಥಿತಿಯಲ್ಲಿ ಆರತಿ ನಿಂತಿದ್ದಾಳೆ. ಸದ್ಯಕ್ಕೆ ಆಕೆ ಏನು ಮಾಡಬೇಕು? ಯಾರ ಬಳಿಗೆ ಹೋಗಬೇಕು?
*
ರಾಖಿ
ಕಟ್ಟಿದ
'ಅಣ್ಣ'ನ
ಜೊತೆಗಿರಬೇಕಾ?
*
ನಿನ್ನನ್ನು
ಬಿಡಲಾರೆನೆಂದು
ಹಳೆಯ
ಗಂಡನ
ಜೊತೆಗಿರುವೆನೆಂದು
ಹಠ
ಹಿಡಿಯಬೇಕಾ?
*
ಇಬ್ಬರ
ಗಂಡಂದಿರ
ಸಹವಾಸವೇ
ಬೇಡವೆಂದು
ಸ್ವತಂತ್ರ
ಜೀವನ
ನಡೆಸಬೇಕಾ?