ಬೀರು ಹುಯ್ಯುವ ಬಾರ್ ಗರ್ಲುಗಳ ಸಾಮೂಹಿಕ ಆತ್ಮಹತ್ಯೆ
"ನಮಗೆ ಇನ್ಯಾವ ದಾರಿಯಿದೆ" ಎಂದು ಒಬ್ಬಾಕೆ ಪ್ರಶ್ನಿಸುತ್ತಾಳೆ. ಇಂದು ಸುಮಾರು 48 ಜನರಿದ್ದ ಬಾರ್ ಗರ್ಲ್ಸ್ ಸದಸ್ಯರಿಂದ ಪೊಲೀಸ್ ಇಲಾಖೆ ಮತ್ತು ಹೈಕೋರ್ಟ್ ಗೆ "ಕೆಲಸ ವಾಪಸ್ ನೀಡಿ" ಎಂದು ಮನವಿ ಸಲ್ಲಿಸಿದ್ದಾರೆ. ಆಗ ಎದುರಿಗೆ ಸಿಕ್ಕ ಅವರು ತಮ್ಮ ದುರಂತ ಬದುಕನ್ನು ತೆರೆದಿಟ್ಟು "ಆತ್ಮಹತ್ಯೆಯೇ ಉಳಿದಿರುವ ದಾರಿ" ಎಂದು ಕಣ್ಣೀರು ಸುರಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ನಗರದ 4 ಸಾವಿರ ಬಾರ್ ಗರ್ಲ್ಸ್ ಕೆಲಸ ಕಳೆದುಕೊಂಡಿದ್ದಾರೆ. "ನನಗೀಗ ಕೆಲಸವಿಲ್ಲ. ಬ್ಯಾಂಕ್ ಅಕೌಂಟ್ ಖಾಲಿಯಾಗಿದೆ. ಮನೆಯೂ ಇಲ್ಲದಾಗಿದೆ. ಈಗ ಅನಿವಾರ್ಯವಾಗಿ ಸ್ನೇಹಿತೆಯರ ಮತ್ತು ಸಂಬಂಧಿಗಳ ಮನೆಯಲ್ಲಿ ಉಳಿಯುತ್ತಿದ್ದೇನೆ. ಅವರ ಮನೆಯಲ್ಲಿ ಎಷ್ಟು ದಿನಾಂತ ಇರಲು ಸಾಧ್ಯ? ಅವರು ಇರಲು ನಿರಾಕರಿಸಿದರೆ ಆತ್ಮಹತ್ಯೆಯೇ ಗತಿ" ಹಾಗಂತ ಕಣ್ಣೀರು ಸುರಿಸಿದವಳ ಹೆಸರು ಕೇಳಲಿಲ್ಲ.
ಇನ್ನೋಬ್ಬಕೆಯ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. "ಮನೆಯಲ್ಲಿ ಹಣಕ್ಕೆ ನನ್ನನ್ನೇ ಅವಲಂಬಿಸಿಕೊಂಡಿದ್ರು. ಇದೀಗ ಅವರಿಗೆ ದುಡ್ಡು ಕಳುಹಿಸಲಾಗದೇ ಪರದಾಡುತ್ತಿದ್ದೇನೆ" ಹೀಗೆ ಹೇಳಿದವಳ ಹೆಸರು ಶ್ವೇತಾ. "ಬಾರ್ ಗರ್ಲ್ಸ್ ಕೆಲಸ ಕಳೆದುಕೊಂಡ ಅನೇಕರು ವೇಶ್ಯಾವಾಟಿಕೆ ಜಾಲದ ಏಜೆಂಟ್ ಬಳಿ ಸಾಗುತ್ತಿದ್ದಾರೆ. ನಮಗೆ ಆತ್ಮಹತ್ಯೆಯೇ ಗತಿ" ಅಂದವಳು ಮತ್ತೊಬ್ಬಾಕೆ.
"ಬಾರ್ ಗರ್ಲ್ಸ್ ಗೆ ನ್ಯಾಯಾಲಯಕ್ಕೆ ಹೋಗುವ ಅಧಿಕಾರವಿದೆ. ನ್ಯಾಯಾಲಯ ಯಾವ ತೀರ್ಪು ನೀಡುತ್ತೋ ಅದನ್ನು ನಾವು ಪಾಲಿಸುತ್ತೇವೆ" ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.