ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತರಿಗೆ ತೊಂದರೆ ಆಗದಂತೆ ಸರದಿಯಲ್ಲಿ ನಿಂತ ಕುಮಾರಸ್ವಾಮಿ

By Srinath
|
Google Oneindia Kannada News

HDK
ಧರ್ಮಸ್ಥಳ, ಜೂನ್ 27: ಆಣೆ ಪ್ರಮಾಣದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇವರ ದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಭಕ್ತರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಲ್ಲಿ ಸರದಿಯಲ್ಲಿ ನಿಂತು ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಕುಮಾರಸ್ವಾಮಿ ಅವರು ಸಜ್ಜಾಗಿದ್ದಾರೆ.

ಇದಕ್ಕೂ ಮನ್ನ ಶ್ರೀ ಕ್ಷೇತ್ರದಲ್ಲಿ ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದು ಯಡಿಯೂರಪ್ಪ ಅವರು 9.09 ಗಂಟೆಗೆ ಸುಮಾರು 35 ಸಚಿವರು,ಶಾಸಕರೊಂದಿಗೆ ಮಂಜುನಾಥನ ದರ್ಶನ ಪಡೆದರು. ಈ ಮಧ್ಯೆ ಸುಮಾರು 20 ನಿಮಿಷ ಕಾಲ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಆಕ್ರೋಶಗೊಡ ಒಂದಷ್ಟು ಭಕ್ತರು ಯಡಿಯೂರಪ್ಪ ವಿರುದ್ಧ ಘೋಷಣೆ ಹಾಕಿದ್ದರು.

ಇದನ್ನು ಅರಿತ ಕುಮಾರಸ್ವಾಮಿ ಅವರು ತಮ್ಮಿಂದಾಗಿ ಭಕ್ತರಿಗೆ ತೊಂದರೆ ಆಗುವುದು ಬೇಡವೆಂದು ಬಯಸಿ, ಕ್ಯೂನಲ್ಲಿ ನಿಲ್ಲಲು ನಿರ್ಧರಿಸಿದ್ದಾರೆ.

English summary
Truth-test at dharmasthala June 27: HD Kumarswamy decides to take q-route for lord Manjunatha Darshan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X