ಮೂಗು ಮುಚ್ಚಿಕೊಳ್ಳಿ, ಈತ ಸ್ನಾನ ಮಾಡಿ 37 ವರ್ಷ ಆಯ್ತು
ಶಿವನ ಅಪಾರ ಭಕ್ತನಾದ ಕೈಲಾಸ್ ಸಿಂಗ್, ದಿನನಿತ್ಯ ದನ ಕಾಯುತ್ತಾನೆ. ಸುಡು ಬಿಸಿಲೇ ಈತನ ದೈನಂದಿನ ಸ್ನಾನ. 47 ಡಿಗ್ರಿ ಸುಡು ಬಿಸಿಲಿರಲಿ ಕೊರೆಯುವ ಚಳಿ ಇರಲಿ, ಶಂಭೋ ಶಂಕರ ಭಂ ಭಂ ಬೋಲೆ ನಾಥ್ ಎಂದು ಗಾಂಜಾ ಸೇವಿಸುವುದು ಬಿಟ್ಟರೆ ಮತ್ತಿತ್ತರ ಯಾವುದೇ ದುಶ್ಚಟಗಳಿರಲಿಲ್ಲ. ವಾರಣಾಸಿಯ ಗಂಗಾತಟದಲ್ಲಿ ಸಾಧುಗಳ ಸಂಗ ಕೂತಿರುತ್ತಾನೆ.
ಪುತ್ರ ಸಂತಾನಕ್ಕಾಗಿ ಈ ವೇಷ: ಚಥವ್ ಗ್ರಾಮದ ಪುರೋಹಿತನೊಬ್ಬ, "ತಲೆಗೂದಲು ಕತ್ತರಿಸದೇ ಹಾಗೇಯೇ ಬಿಟ್ಟಲ್ಲಿ ನಿನಗೆ ಗಂಡು ಮಗು ಜನಿಸುತ್ತದೆ ಎಂದು ಸಲಹೆ ನೀಡಿದ್ದ. 1974ರಿಂದ ಸ್ನಾನ ಮಾಡುವ ಗೋಜಿಗೆ ಹೋಗಲಿಲ್ಲ. ಗಂಡನ ಹುಚ್ಚಾಟ ಕಂಡು ಹಣೆ ಬಡಿದು ಕೊಳ್ಳುವ ಆತನ ಪತ್ನಿ ಕಲಾವತಿ ದೇವಿ ಅನೇಕ ಸಾರಿ ಬಲವಂತವಾಗಿ ಸ್ನಾನ ಮಾಡಿಸಿ ವ್ರತ ಭಂಗ ಮಾಡಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಎಷ್ಟೊ ಬಾರಿ ನಾನು ಆತನೊಂದಿಗೆ ಮಲಗಲು ನಿರಾಕರಿಸಿದ್ದು, ಅನ್ಯದಾರಿ ಕಾಣದೆ ಅವರ ಕಮಟು ಬೆವರಿನೊಂದಿಗೆ ರಾಜಿ ಮಾಡಿಕೊಂಡಿದ್ದೇನೆ. ಬಹುಶಃ ನಮಗೆ ಪುತ್ರನ ಪ್ರಾಪಿಯಾದಲ್ಲಿ ಮಾತ್ರ ಆತ ನಿರ್ಧಾರ ಬದಲಿಸಬಹುದು ಎನ್ನುತ್ತಾಳೆ ಕಲಾವತಿ ದೇವಿ.
ಊರಿನ ಬೀದಿಗೆ ಆತ ಕಾಲಿಟ್ಟಂತರಂತೂ ಜನ ಆಡಿಕೊಂಡು ನಗುತ್ತಿದ್ದಾರೆ. ಆದರೆ ಕೈಲಾಸ್ ಮಾತ್ರ ಯಾವುದಕ್ಕೂ ತಲೆಗೆಡಿಸದೆ ತನ್ನ ದೈನಂದಿನ ಚಟುವಟಿಕೆಯಲ್ಲಿ ತಲ್ಲೀನನಾಗಿರುತ್ತಾನೆ. ಪುತ್ರಿಯೊಬ್ಬಳು (16) ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ತಂದೆಯ ಪ್ರಸಿದ್ಧಿಯಿಂದಾಗಿ ಇಡೀ ಶಾಲೆಯೇ ನಮ್ಮನ್ನು ಗುರುತಿಸುತ್ತಿದೆ ಎನ್ನುತ್ತಾಳೆ. ಇದು ಶಿವನ ಮೆಚ್ಚುಗೆ ಪಡೆಯಲು ಮಾಡುವ ಕಾರ್ಯ, ಮಗ ಹುಟ್ಟುವ ತನಕ ಸ್ನಾನ ಮಾಡುವುದಿಲ್ಲ ಎಂದು ಕೈಲಾಸ್ ಸ್ಪಷ್ಟವಾಗಿ ಹೇಳುತ್ತಾನೆ.