ನೇತ್ರಾವತಿ ನದಿ ತಿರುವಿಗೆ ನಮ್ಮ ವಿರೋಧ ಯಾಕೆಂದರೆ...
ಯೋಜನೆಗೆ ಯಾಕೆ ವಿರೋಧ? ಏನು ಸಮಸ್ಯೆ? ಸಭೆಯಲ್ಲಿ ಕೇಳಿಬಂದ ಅಭಿಪ್ರಾಯಗಳಿವು
* ಈ ಯೋಜನೆ ಮತಬ್ಯಾಂಕ್ ರಾಜಕಾರಣ ಮತ್ತು ಹಣ ಲೂಟಿ ಮಾಡುವ ಯೋಜನೆ. ಇದನ್ನು ವಿರೋಧಿಸಲು ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಬೇಕು: ನೇತ್ರಾವತಿ ನದಿ ಬಳಕೆದಾರರ ವೇದಿಕೆ ಸಂಚಾಲಕ ಪಿ. ವಿ. ಮೋಹನ್
* ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿರುವ ನೀರಿನ ಸಮಸ್ಯೆಗೆ ಕರಾವಳಿ ಜನರು ಕಾರಣರಲ್ಲ. ರಾಜ್ಯ, ಕೇಂದ್ರ ಸರಕಾರ ಅದರ ಜವಾಬ್ದಾರಿ ವಹಿಸಬೇಕು. ಅವರ ಬಗ್ಗೆ ನಮಗೆ ಕರುಣೆಯಿದೆ. ಹಾಗಂತ ನದಿ ನೀರನ್ನು ಅಲ್ಲಿಗೆ ತಿರುಗಿಸೋದಕ್ಕೆ ಅವಕಾಶ ನೀಡುವುದಿಲ್ಲ: ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ.
* ನೇತ್ರಾವತಿ ನದಿ ನೀರನ್ನು ಇಲ್ಲಿನ ಜನರ ಉಪಯೋಗಕ್ಕೆ ಬಳಸುವ ಒಂದೇ ಯೋಜನೆ ರೂಪಿಸಿಲ್ಲ. ನಮ್ಮ ರಾಜಕಾರಣಿಗಳು ಈ ಕುರಿತು ಚಿಂತಿಸದಿರುವುದು ವಿಷಾದನೀಯ: ಡಾ. ಎಚ್ ಜಿ ಮಯ್ಯ, ಎನ್ಐಟಿಕೆ ಪ್ರಾಧ್ಯಾಪಕರು
* ಈ ಯೋಜನೆ ಮೀನುಗಾರಿಕೆಗೆ ಹೊಡೆತ ನೀಡಲಿದೆ. ಸಮುದ್ರಕ್ಕೆ ಹರಿಯುವ ನೀರು ಕಡಿಮೆಯಾಗಿ, ಮೀನಿನ ಸಂತಾನಾಭಿವೃದ್ಧಿಗೆ ಹೊಡೆತ ನೀಡಲಿದೆ: ವಾಸುದೇವ ಬೋಳೂರು.
* ಸರಕಾರ ಎತ್ತಿನ ಹಳ್ಳ ಯೋಜನೆಯೊಂದನ್ನು ಈಗಾಗಲೇ ಸಕಲೇಶಪುರದಿಂದ ಆರಂಭಿಸಿದೆ. ಇದು ನೇತ್ರಾವತಿ ತಿರುವ ಯೋಜನೆಯಾಗಿರುವ ಸಾಧ್ಯತೆಯಿದೆ: ಸುಂದರ ರಾವ್, ಕೃಷಿಕ
* ಇದು ಕರಾವಳಿ ಜಿಲ್ಲೆಗಳಿಗೆ ಮಾರಕ: ಸಭೆಯಲ್ಲಿ ಎಲ್ಲರ ಅಭಿಪ್ರಾಯ [ಓದಿ: ನೇತ್ರಾವತಿ ಗೋಳು ಕೇಳುವವರು ಯಾರು? ]