ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುದುರೆಯಿಂದ ಬಿದ್ದು ಗಾಯಮಾಡಿಕೊಂಡ ನಿತ್ಯಾನಂದ
ಕುದುರೆ ಸವಾರಿ ಅಭ್ಯಾಸ ಮಾಡುತ್ತಿರಬೇಕಾದರೆ ಕೆಳಗೆ ಬಿದ್ದುಬಿಟ್ಟಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಕುದುರೆ ಸವಾರಿ ಸಂದರ್ಭದಲ್ಲಿ ಸ್ವಾಮೀಜಿಗಳು ಆಕಸ್ಮಿಕವಾಗಿ ಕೆಳಗೆ ಬಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭಕ್ತವೃಂದ ಭಯ ಪಡುವ ಅವಶ್ಯಕತೆಯಿಲ್ಲ. ಅವರು ಆದಷ್ಟು ಬೇಗ ಸ್ವಾಮೀಜಿಗಳು ಗುಣಮುಖರಾಗಿ ಧ್ಯಾನ ಪೀಠಕ್ಕೆ ತೆರಳಲಿದ್ದಾರೆ" ಎಂದು ನಿತ್ಯಾನಂದರ ಶಿಷ್ಯ ವೃಂದದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ನಿತ್ಯಾನಂದ ದಾಖಲಾಗಿದ್ದಾರೆ. ಮುರಿದಿರುವ ಕೈಗೆ ಇನ್ನೇನು ಕೆಲವೇ ಸಮಯದಲ್ಲಿ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ನಿತ್ಯಾನಂದ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕೊಠಡಿಗೆ ತನ್ನ ಶಿಷ್ಯ ವೃಂದವನ್ನು ಹೊರತು ಪಡಿಸಿ ಯಾರಿಗೂ ಪ್ರವೇಶ ನೀಡದೆ ಭಾರೀ ಭದ್ರತೆ ಒದಗಿಸಲಾಗಿದೆ.
Comments
ಸ್ವಾಮಿ ನಿತ್ಯಾನಂದ ಬಿಡದಿ ಮಣಿಪಾಲ್ ಆಸ್ಪತ್ರೆ ಬೆಂಗಳೂರು swami nithyananda bidadi manipal hospital bangalore
English summary
Swamy Paramahamsa Nithyananda had a fall while learnig horse riding. Nithyananda has been admitted to Manipal hospital on Airport Road, Bangalore. The doctors will doing operation on the fractured hand said Bidadi dhyanapeetham sources.
Story first published: Tuesday, June 14, 2011, 17:20 [IST]