ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಯಿಂದ ಬಿದ್ದು ಗಾಯಮಾಡಿಕೊಂಡ ನಿತ್ಯಾನಂದ

By Shami
|
Google Oneindia Kannada News

Swami Nithyananda
ಬೆಂಗಳೂರು ಜೂ 14: ಧ್ಯಾನ, ಏಕಾಗ್ರತೆ, ಸಂಯಮ ಮತ್ತು ರಾಸಲೀಲೆ ಖ್ಯಾತಿಯ ಬಿಡದಿ ನಿತ್ಯಾನಂದ ಸ್ವಾಮೀಜಿ ಮಂಗಳವಾರ ಬೆಳಗ್ಗೆ ವಾಯು ವಿಹಾರ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ.

ಕುದುರೆ ಸವಾರಿ ಅಭ್ಯಾಸ ಮಾಡುತ್ತಿರಬೇಕಾದರೆ ಕೆಳಗೆ ಬಿದ್ದುಬಿಟ್ಟಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

"ಕುದುರೆ ಸವಾರಿ ಸಂದರ್ಭದಲ್ಲಿ ಸ್ವಾಮೀಜಿಗಳು ಆಕಸ್ಮಿಕವಾಗಿ ಕೆಳಗೆ ಬಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭಕ್ತವೃಂದ ಭಯ ಪಡುವ ಅವಶ್ಯಕತೆಯಿಲ್ಲ. ಅವರು ಆದಷ್ಟು ಬೇಗ ಸ್ವಾಮೀಜಿಗಳು ಗುಣಮುಖರಾಗಿ ಧ್ಯಾನ ಪೀಠಕ್ಕೆ ತೆರಳಲಿದ್ದಾರೆ" ಎಂದು ನಿತ್ಯಾನಂದರ ಶಿಷ್ಯ ವೃಂದದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ನಿತ್ಯಾನಂದ ದಾಖಲಾಗಿದ್ದಾರೆ. ಮುರಿದಿರುವ ಕೈಗೆ ಇನ್ನೇನು ಕೆಲವೇ ಸಮಯದಲ್ಲಿ ನುರಿತ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ. ನಿತ್ಯಾನಂದ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕೊಠಡಿಗೆ ತನ್ನ ಶಿಷ್ಯ ವೃಂದವನ್ನು ಹೊರತು ಪಡಿಸಿ ಯಾರಿಗೂ ಪ್ರವೇಶ ನೀಡದೆ ಭಾರೀ ಭದ್ರತೆ ಒದಗಿಸಲಾಗಿದೆ.

English summary
Swamy Paramahamsa Nithyananda had a fall while learnig horse riding. Nithyananda has been admitted to Manipal hospital on Airport Road, Bangalore. The doctors will doing operation on the fractured hand said Bidadi dhyanapeetham sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X