ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರುಣೆಯಿಲ್ಲ ವರುಣ, ಮಂಗಳೂರು ಮಳೆಗೆ ನವ ವಿವಾಹಿತ ಬಲಿ
ಮಳೆಗೆ ಕಾರ್ಕಳದ ಅಜೆಕಾರು ಬೈಲುಮನೆ ನಿವಾಸಿ ಶಿಶುಪಾಲ ಶೆಟ್ಟಿ(32) ಆಯತಪ್ಪಿ ತೋಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಮದುವೆಯಾಗಿ 20 ದಿನಗಳು ಕಳೆದಿತ್ತಷ್ಟೇ. ಶಿಶುಪಾಲ ಹಲವು ವರ್ಷ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಊರಿನಲ್ಲಿ ಸೆಟಲ್ ಆಗಿ ಕೃಷಿ ಕೆಲಸ ಮಾಡುತ್ತ ನೆಮ್ಮದಿಯ ಜೀವನ ನಡೆಸುವ ಕನಸು ಕಾಣುತ್ತಿದ್ದರು.
ನಿನ್ನೆ ಸುಬ್ರಹ್ಮಣ್ಯ, ಪುತ್ತೂರು, ಕೊಲ್ಲೂರು ಮತ್ತು ಇತರ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕೊಲ್ಲೂರಿನಲ್ಲಿ ದಾಖಲೆ ಪ್ರಮಾಣದಲ್ಲಿ 11 ಸೆಂಟಿಮೀಟರ್ ಮಳೆ ಸುರಿದಿದೆ. ಸಂಪಿಗೆನಗರ, ಉದ್ಯಾವರದಲ್ಲಿ ಹಲವು ಮನೆಗಳು ಹಾನಿಗೀಡಾದ ವರದಿಯಾಗಿದೆ.
Comments
ಮುಂಗಾರು ಮಳೆ ದಕ್ಷಿಣ ಕನ್ನಡ ಮಂಗಳೂರು ಉಡುಪಿ ಕಾರ್ಕಳ ಪುತ್ತೂರು ಸುಬ್ರಹ್ಮಣ್ಯ ಕೊಲ್ಲೂರು monsoon udupi dakshina kannada subrahmanya puttur
English summary
Rains intensified on June 12 in almost all the taluks of the Udupi and Dakshina Kannada. A newly-married Shishupal Shetty (32), resident of Nadimar Bailumane in Karkala taluk, lost his life after slipping and falling into a waterway brimming with water.
Story first published: Monday, June 13, 2011, 16:41 [IST]