ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭ್ರಷ್ಟಾಚಾರದ ವಿರುದ್ಧ ಸೋನಿಯಾಗೂ ಬೆಂಬಲವೇ: ಆರ್ಎಸ್ಎಸ್
ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಬಾಬಾ ರಾಮ್ದೇವ್ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಹಿಂದೆ ಆರೆಸ್ಸೆಸ್ ಸಂಚು ಇದೆ. ಈ ಸಂಚನ್ನು ಪುತ್ತೂರಿನಲ್ಲಿ ನಡೆದ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿಯೇ ಸಿದ್ಧಪಡಿಸಲಾಗಿತ್ತು ಎಂಬ ಆರೋಪದ ಕುರಿತಂತೆ ದಿನಪತ್ರಿಕೆಯೊಂದಕ್ಕೆ ಡಾ. ಭಟ್ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಪುತ್ತೂರಿನಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಭ್ರಷ್ಟಾಚಾರದ ವಿರುದ್ಧ ಆರೆಸ್ಸೆಸ್ ನಿರ್ಣಯ ತೆಗೆದುಕೊಂಡಿತ್ತು. ಆದರೆ ಈ ನಿರ್ಣಯವು ಸಂಘ ಸಮಾಜಕ್ಕೆ ನೀಡಿದ ಸಂದೇಶವೇ ಹೊರತು ಯಾರದೇ ಪರ ಅಥವಾ ವಿರುದ್ಧ ತೆಗೆದುಕೊಂಡ ತೀರ್ಮಾನವಲ್ಲ. ಸಂಘದ ಈ ತೀರ್ಮಾನದ ಕುರಿತಂತೆ ದೇಶದ ಗೃಹ ಸಚಿವರು ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಮೂಗಿನ ನೇರಕ್ಕೆ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ ಎಂದು ಡಾ. ಭಟ್ ಸ್ಪಷ್ಟಪಡಿಸಿದ್ದಾರೆ.
Comments
English summary
Citing instances of RSS's support for Baba's campaign, home minister Chidambaram had said that this is a political agitation which is fully backed by the RSS and its front organizations. But RSS South chief has denied it. Dr. Prabhakar Bhat Kalladka has reacted to this effect in Puttur.
Story first published: Thursday, June 9, 2011, 9:13 [IST]