ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ಹತ್ಯೆಗೆ 30 ಲಕ್ಷ ರು ಸುಪಾರಿ ರೀ : ಅಣ್ಣಾ ಹಜಾರೆ
'ಸಚಿವರೊಬ್ಬರು ನನ್ನನ್ನು ಸಾಯಿಸಲು ಬಾಡಿಗೆ ಹಂತಕರಿಗೆ 30 ಲಕ್ಷ ರು. ಸುಪಾರಿ ನೀಡಿದ್ದಾರೆ. ದೇವರು ನನ್ನ ಜತೆಗಿರುವುದರಿಂದ ನಾನು ಬದುಕುಳಿದಿದ್ದೇನೆ' ಎಂದು ಅಣ್ಣಾ ಆತಂಕ ವ್ಯಕ್ತಪಡಿಸಿದ್ದಾರೆ. ಬಾಬಾ ರಾಮ್ದೇವ್ ಮೇಲೆ ಪೊಲೀಸರು ಆಕ್ರಮಣ ಮಾಡಿರುವುದನ್ನು ಪ್ರತಿಭಟಿಸಿ ಬುಧವಾರ ರಾಜಘಾಟ್ನಲ್ಲಿ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಹಜಾರೆ ಈ ನೇರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಪವನ್ರಾಜೆ ನಿಂಬಾಲ್ಕರ್ ಅವರನ್ನು ಐದು ವರ್ಷಗಳ ಹಿಂದೆ ಸಾಯಿಸಿರುವ ಆರೋಪಿಗಳು ಕೂಡ ವಿಚಾರಣೆ ಸಂದರ್ಭದಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ. ನಿಂಬಾಲ್ಕರ್ ಹತ್ಯೆಗೆ ನೇಮಿಸಲ್ಪಟ್ಟಿದ್ದ ಬಾಡಿಗೆ ಹಂತಕರಿಗೆ ಹಜಾರೆಯನ್ನು ಸಾಯಿಸಲು ಕೂಡ ಸುಪಾರಿ ನೀಡಲಾಗಿತ್ತು. ಆದರೆ ಹಜಾರೆ ಒಳ್ಳೆಯ ವ್ಯಕ್ತಿ ಎಂದು ಹೇಳಿ ಅವರು ಈ ಸುಪಾರಿ ಸ್ವೀಕರಿಸಲು ನಿರಾಕರಿಸಿದ್ದರು.
Comments
English summary
During his day-long fast at Rajghat in New Delhi, Anna Hazare shocked everyone when he levelled serious allegations against the government, saying a Minister had given the supari (contract killing) of Rs 30 lakh to kill him, but he survived due to god's blessing.
Story first published: Thursday, June 9, 2011, 11:01 [IST]