ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದಿರಾ ಕೃಷ್ಣಪ್ಪ ಅವರಿಗೆ ನಾಲ್ವಡಿ ಒಡೆಯರ್ ಪ್ರಶಸ್ತಿ
ಒಡೆಯರ್ ಅವರಿಗೆ ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಇದ್ದ ಕಾಳಜಿಯನ್ನು ಬಿಂಬಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ, ಇದರಿಂದ ಯುವ ಪೀಳಿಗೆ ಇವರ ಆದರ್ಶವನ್ನು ತಮ್ಮಲ್ಲಿ ಬೆಳೆಸಿ ಕೊಳ್ಳುವುದು ಈ ಪ್ರಶಸ್ತಿಯ ಉದ್ದೇಶ.
ಜೂನ್ 13 ಸಂಜೆ ಐದು ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಂ ವಿ ರಾಜಶೇಖರನ್ ಪ್ರಶಸ್ತಿ ವಿತರಿಸಲಿದ್ದಾರೆ.
ದಲಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಇಂದಿರಮ್ಮ ಕೃಷ್ಣಪ್ಪ ಅವರಿಗೆ ಈ ಬಾರಿಯ ಪ್ರಶಸ್ತಿ ನೀಡಲಾಗುತ್ತಿದೆ. ವರದಕ್ಷಿಣೆ ಕಿರುಕುಳ ಮತ್ತು ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಕ್ಕಾಗಿ ಹೋರಾಟ, ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಅವರಿಗೆ ಪ್ರಶಸ್ತಿ ಲಭಿಸುತ್ತಿದೆ.
ಜಯರಾಮರಾಜೇ ಅರಸ್ ಮತ್ತು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸಂಗಮೇಶ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Comments
English summary
Indira Krishnappa honored with Nalwadi Krishnaraja wodeyar award for serving a cause; upliftment of dalits in Karnataka. The award is instituted by Kannada sahithya parishat, Bangalore District
Story first published: Wednesday, June 8, 2011, 18:29 [IST]