ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾದಿರುವರು ಶ್ರೀರಾಮುಲು ಬಳ್ಳಾರಿಗೆ ಸುಷ್ಮಾ ಬರುವರೆಂದು
ಶನಿವಾರ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಾಯಿ, ನಮ್ಮ ದೇವರು ಸುಷ್ಮಾ ಸ್ವರಾಜ್ ಅವರು, ನಮ್ಮ ಹಾಗೂ ನಮ್ಮ ಮಿತ್ರರಾದ ರೆಡ್ಡಿ ಸಹೋದರರ ಕುರಿತು ಮಾತನಾಡಿದ ನಂತರ ನಾನು ಸಂಪರ್ಕಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಅವರು ಹೇಳಿದರು.
ಆದರೆ, ಆಗಸ್ಟ್ 12ರ ಶ್ರಾವಣ ಶುಕ್ರವಾರದಂದು ಬಳ್ಳಾರಿಯಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ನಾನೇ ಖುದ್ಧಾಗಿ ದೆಹಲಿಗೆ ಹೋಗಿ ಅವರನ್ನು ಆಹ್ವಾನಿಸುತ್ತೇನೆ. ನಮ್ಮಿಂದ ಏನಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ ಎಂದು ಕೇಳುತ್ತೇನೆ. ರಾಜಕೀಯದಲ್ಲಿ ಕೆಲವೊಮ್ಮೆ ತಿಳಿಯದೇ ತಪ್ಪುಗಳಾಗಿರುವುದು ಸಹಜ. ಕಾರಣ ಕ್ಷಮೆ ಕೋರುತ್ತೇನೆ ಎಂದರು.
ಪ್ರತಿ ವರ್ಷ ಶ್ರಾವಣ ಶುಕ್ರವಾರ ತಪ್ಪದೇ ಬಳ್ಳಾರಿಗೆ ಬರುತ್ತೇನೆ, ಮನೆಯ ಮಗಳಾಗಿ ಇಲ್ಲಿಯೇ ವರಮಹಾಲಕ್ಷ್ಮಿ ಪೂಜೆ ನಡೆಸುತ್ತೇನೆ ಎಂದು ಅವರು ಮಾತು ನೀಡಿರುವ ಹಿನ್ನೆಲೆಯಲ್ಲಿ ಅವರು ತಪ್ಪದೇ ಬಳ್ಳಾರಿಗೆ ಬರುತ್ತಾರೆ ಎನ್ನುವ ವಿಶ್ವಾಸ ನನ್ನದು ಎಂದು ಅವರು ಹೇಳದರು.
Comments
ಸುಷ್ಮಾ ಸ್ವರಾಜ್ ರೆಡ್ಡಿ ಸಹೋದರರು ಶ್ರೀರಾಮುಲು ಬಳ್ಳಾರಿ ಜಿಲ್ಲಾಸುದ್ದಿ sushma swaraj reddy brothers district news
English summary
Health minister B Sriramulu has expressed confidence that Sushma Swaraj will come to Bellary on Shravana Friday to bless the couple at mass marriage function. Sushma had said she had no hand in raise of reddy brothers and had aired her anger in an interview to a magazine.
Story first published: Saturday, June 4, 2011, 17:26 [IST]