ಎಂಎಲ್ಸಿ ಕೋಟ ಪೂಜಾರಿ ಹತ್ಯೆ ಸಂಚು:ಇಬ್ಬರ ಬಂಧನ
ಹೊಸನಗರ
ನಿವಾಸಿ
ರಾಘವೇಂದ್ರ
ಮತ್ತು
ಸಿದ್ದಾಪುರದ
ಬಶೀರ್
ಬಂಧಿತರು.
ಜೈಲಿನಲ್ಲಿರು
ಸಂತೋಷ್
ಮತ್ತು
ತ್ರಾಸಿಯ
ರಾಘವೇಂದ್ರ
ಕೊಲೆಗಡುಕರಿಗೆ
ನೆರವಾಗಿದ್ದರು
ಎನ್ನಲಾಗಿದೆ.
ಕರಾವಳಿಯಲ್ಲಿ
'ಮಿಸ್ಟರ್
ಕ್ಲೀನ್"
ಎನ್ನುವ
ಇಮೇಜ್
ಹೊಂದಿರುವ
ಶ್ರೀನಿವಾಸ
ಪೂಜಾರಿ
ಅವರನ್ನು
ಹತ್ಯೆ
ಮಾಡಲು
ಸಂಚು
ರೂಪಿಸಲಾಗಿತ್ತು
ಎನ್ನುವ
ಮಾಹಿತಿಯೇ
ಕುತೂಹಲಕಾರಿಯಾಗಿದೆ.
ಅತ್ಯಂತ
ಸಜ್ಜನಿಕೆಯ
ಪೂಜಾರಿ
ಅವರ
ಮೇಲೆ
ಯಾವ
ಕಾರಣಕ್ಕೆ
ಇವರಿಗೆ
ದ್ವೇಷ
ಎನ್ನುವುದು
ಬಹಿರಂಗವಾಗಿಲ್ಲ.
***
ಉದ್ಯೋಗ
ಕೊಡುವಂತೆ
ಸಂತ್ರಸ್ತರ
ಸತ್ಯಾಗ್ರಹ:
ಮಂಗಳೂರು
ವಿಶೇಷ
ಆರ್ಥಿಕ
ವಲಯ
(MSEZ)
ದಿಂದ
ಸಂತ್ರಸ್ತರಾದವರ
ಮಕ್ಕಳಿಗೆ
ಉದ್ಯೋಗ
ನೀಡಬೇಕೆಂದು
ಆಗ್ರಹಿಸಿ
ಕಳೆದ
ನಾಲ್ಕು
ದಿನಗಳಿಂದ
ನಿರ್ವಸಿತರ
ಮಕ್ಕಳು
ಸತ್ಯಾಗ್ರಹ
ನಡೆಸುತ್ತಿದ್ದಾರೆ.
ಭೂಸ್ವಾಧೀನ
ಮಾಡುವ
ಮೊದಲೇ
ಈ
ಬಗ್ಗೆ
ಒಪ್ಪಂದವಾಗಿತ್ತು,
ಆದರೆ
ಈಗ
ಆ
ಒಪ್ಪಂದವನ್ನು
ಮುರಿಯಲಾಗಿದೆ
ಎಂದು
ಆರೋಪಿಸಿ
ನಿರ್ವಸಿತರು
ಆಹೋರಾತ್ರಿ
ಧರಣಿ
ನಡೆಸುತ್ತಿದ್ದಾರೆ.
ನಿರ್ವಸಿತರಾದವರ ಮಕ್ಕಳಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡುವ ಕುರಿತು ಮಾರ್ಗಸೂಚಿ ಸಿದ್ದಪಡಿಸಲಾಗಿದೆ. ಆದರೆ ಇಂಥ ಮಾರ್ಗಸೂಚಿ ಸಿದ್ದಪಡಿಸುವಾಗ ಸಂಬಂಧಪಟ್ಟ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ವಿಧಾನ ಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್ ಹೇಳಿದ್ದಾರೆ. ಅಧಿಕಾರಿಗಳು ತಮಗೆ ಬೇಕಾದಂತೆ ಮಾರ್ಗ ಸೂಚಿ ಮಾಡಿಕೊಂಡಿದ್ದಾರೆ, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನೆ ನಿರತರ ನೇತೃತ್ವ ವಹಿಸಿರುವ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.