ಮಡಿಕೇರಿ-ಸಂಪಾಜೆ ರಸ್ತೆ ಜೂ.1 ರಿಂದ ಮುಕ್ತ ಮುಕ್ತ
ಇದರಿಂದಾಗಿ ಮಡಿಕೇರಿ-ಸುಳ್ಯ ಮಾರ್ಗವಾಗಿ ಮಂಗಳೂರು ತೆರಳುತ್ತಿದ್ದ ಬಸ್ಗಳೆಲ್ಲವೂ ಮೈಸೂರು-ಹಾಸನ ಮಾರ್ಗವಾಗಿ ಇನ್ನು ಕೆಲವು ಕುಶಾಲನಗರ, ಸೋಮವಾರಪೇಟೆ ಬಿಸಿಲೆ ಮಾರ್ಗವಾಗಿ ತೆರಳುತ್ತಿದ್ದವು. ಮಡಿಕೇರಿಯಿಂದ ಸಂಪಾಜೆ ತನಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಮಿನಿ ಬಸ್ ಸೌಲಭ್ಯವನ್ನು ಏರ್ಪಡಿಸಿತ್ತು.
ಮಡಿಕೇರಿಯಿಂದ ಸಂಪಾಜೆ ತನಕ ಸುಮಾರು 28 ಕಿ.ಮೀ. ದ್ವಿಪಥ ರಸ್ತೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಹಮ್ಮಿಕೊಂಡಿತ್ತಲ್ಲದೆ, ಮೇ 31 ರೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಹಲವು ಕಾರಣಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಸುಮಾರು 28 ಕಿ.ಮೀ. ಪೈಕಿ ಕೇವಲ 18 ಕಿ.ಮೀ ಮಾತ್ರ ಪೂರ್ಣಗೊಂಡಿದೆ.
ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯಲು ಹಾಗೂ ಕಾಮಗಾರಿ ಪೂರ್ಣಗೊಳ್ಳದಿರಲು ಕಚ್ಚಾವಸ್ತುಗಳ ಕೊರತೆಯೇ ಕಾರಣ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿರುವುದರಿಂದ ಕಾಮಗಾರಿ ನಡೆಸಲು ತೊಂದರೆಯಾಗುವುದರಿಂದ ಸ್ಥಗಿತಗೊಳಿಸಲಾಗುತ್ತಿದ್ದು, ಉಳಿದ ಕಾಮಗಾರಿಯನ್ನು ಮಳೆಗಾಲ ಬಳಿಕ ಅಂದರೆ ನವೆಂಬರ್ನಲ್ಲಿ ಹಮ್ಮಿಕೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ನಿಗದಿತ ಸಮಯಕ್ಕೆ ಕಾಮಗಾರಿ ಆಗದೆ ಇರುವುದರಿಂದ ಈ ವ್ಯಾಪ್ತಿಯ ಜನರಿಗೆ ತೊಂದರೆಯಾಗಿದ್ದು, ಮುಂದೆಯೂ ಮತ್ತೆ ರಸ್ತೆ ಸಂಚಾರ ಬಂದ್ ಆದರೆ ಇನ್ನಷ್ಟು ತೊಂದರೆ ಉಂಟಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.