ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರ ವರ್ತನೆ ಮೇಲೆ ಕಣ್ಗಾವಲು: ಯಡಿಯೂರಪ್ಪ
ರಾಜ್ಯಪಾಲರ ವರ್ತನೆ ಮೇಲೆ ನಿಗಾ ವಹಿಸಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಿಳಿಸಿದ್ದಾರೆ. ಸೋಮವಾರ ದೆಹಲಿಯಿಂದ ವಾಪಸಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರಿಗೆ ಛೀಮಾರಿ ಹಾಕಿದೆ. ಅವರು ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಹರಿಹಾಯ್ದರು.
ಕಳೆದ ಒಂದು ವಾರದಿಂದ ನಡೆದ ಬೆಳವಣಿಗೆಗಳಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ವಿಧಾನಸಭೆಯ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶದಿಂದಾಗಿ ಮುಂದಿನ 20 ವರ್ಷಗಳ ಕಾಲ ಪ್ರತಿಪಕ್ಷ ಸ್ಥಾನದಲ್ಲೇ ಕೂಡುವ ಭೀತಿ ಕಾಂಗ್ರೆಸ್ ನಾಯಕರಿಗೆ ಆವರಿಸಿದೆ ಎಂದು ಲೇವಡಿ ಮಾಡಿದರು.
Comments
ಯಡಿಯೂರಪ್ಪ ರಾಷ್ಟ್ರಪತಿ ಆಳ್ವಿಕೆ ಕರ್ನಾಟಕ ಬಿಜೆಪಿ ಸರಕಾರ ರಾಜ್ಯಪಾಲ ಕಾಂಗ್ರೆಸ್ yediyurappa governor karnataka bjp presidents rule
English summary
After Union Government rejected to impose President’s Rule in Karnataka, CM Yeddyurappa declared that Karnataka BJP will keep close watch on Governor.
Story first published: Tuesday, May 24, 2011, 8:08 [IST]