ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೊಸೆ ತಂದ ದೌರ್ಭಾಗ್ಯ; ನೇಣಿಗೆ ಶರಣಾದ ಅತ್ತೆ
ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಬಿಕಾ (50) ಎಂಬಾಕೆಯೇ ನೇಣಿಗೆ ಶರಣಾದವರು. ಈಕೆಯ ಪತಿ ಗಂಗಾಧರಯ್ಯ ಬಿಎಂಟಿಸಿ ನೌಕರ. ಇವರು ತಮ್ಮ ಪುತ್ರ ಜಯಶಂಕರ್ಗೆ ಬೇರೊಂದು ಸಂಬಂಧವನ್ನು ನೋಡಿದ್ದರು.
ಈ ವಿಚಾರವಾಗಿ ದಂಪತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕಡೆಗೆ ಪತಿಯ ಮೇಲೆ ಕೋಪಗೊಂಡ ಅಂಬಿಕಾ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನ ಮದುವೆ ನಿಶ್ಚರ್ಯವಾಗಿದ್ದು, ಮೂರು ದಿನಗಳಲ್ಲಿ ಮಗನ ಮದುವೆ ನಡೆಯಬೇಕಿತ್ತು. ಮೃತರು ದೊಡ್ಡಕ್ಕನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. (ದಟ್ಸ್ಕನ್ನಡ ವಾರ್ತೆ)
Comments
English summary
Differences with her husband over choosing a suitable girl for their son ended in a teacher hanging herself at her home in Madivala on Friday. The police said Ambika (50) was depressed after her husband rejected her choice for a bride for their son Jayashankar.
Story first published: Saturday, May 21, 2011, 13:02 [IST]