ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ.ಕ ನೂತನ ಜಿಲ್ಲಾಧಿಕಾರಿ ಮುಂದೆ ಮರಳು ದಂಧೆ

|
Google Oneindia Kannada News

NS Channappa Gowda
ಮಂಗಳೂರು, ಮೇ 17: ಅಕ್ರಮ ಮರಳು ಸಾಗಾಟ ನಿಯಮವನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲು ಯತ್ನಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಎನ್. ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ. ಈಗ ಮರಳು ಸಾಗಾಟ ವಿಷಯ ಸರಕಾರ ಮತ್ತು ನ್ಯಾಯಾಲಯದ ಮಧ್ಯೆ ಇದೆ. ಹೀಗಾಗಿ ಜೂನ್ ತಿಂಗಳವರೆಗೆ ಹಳೆಯ ಲೀಸ್ ಪಡೆದವರೇ ಮರಳುಗಾರಿಕೆ ನಡೆಸಲಿದ್ದಾರೆ ಎಂದರು.

ಆದರೆ ಸರಕಾರವು ಶೀಘ್ರದಲ್ಲಿ ನೂತನ ನಿಯಮಾವಳಿ ರೂಪಿಸುವ ಸಾಧ್ಯತೆಯಿದೆ. ನಂತರ ಅದಕ್ಕನುಗುಣವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಚನ್ನಪ್ಪ ಗೌಡ ತುಮಕೂರು ಜಿಲ್ಲೆಯವರಾಗಿದ್ದು, ಎಂಎಸ್ ಪದವಿ ಪಡೆದಿದ್ದಾರೆ. ಜೊತೆಗೆ ನಗರಾಭಿವೃದ್ಧಿ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಈ ಹಿಂದೆ ಇವರು ಚಿಕ್ಕ ಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

English summary
N.S. Channappa Gowda, who took over as DC of Dakshina Kannada on Monday. He promised to implement the sand mining policy of the government in all its earnest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X