ಯಡಿಯೂರಪ್ಪ, ಪ್ರಧಾನಿ, ಜ್ಯೋತಿಷಿಗೆ ಅಗ್ನಿಪರೀಕ್ಷೆ
ದೆಹಲಿಯ ಪ್ರಧಾನಿ ಕಚೇರಿಯಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ, ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಯಡಿಯೂರಪ್ಪ ಸರಕಾರ ವಜಾಗೊಳಿಸಬೇಕು ಎಂದು ಕಳಿಸಿರುವ ವರದಿಯನ್ನು ಕೇಂದ್ರ ತರಾತುರಿಯಲ್ಲಿ ಒಪ್ಪಲಿಕ್ಕಿಲ್ಲ ಎಂಬ ಸುದ್ದಿ ವಿಶ್ವಸನೀಯ ಮೂಲಗಳಿಂದ ತಿಳಿದುಬರುತ್ತಿದೆ. ಅದೃಷ್ಟ ಪರೀಕ್ಷೆಗೆ ನಿಂತಿರುವ ಯಡಿಯೂರಪ್ಪ ಐದನೇ ಬಾರಿ ಅಪಾಯದಿಂದ ಪಾರಾಗುವ ಲಕ್ಷಣಗಳು ಕಾಣುತ್ತಿವೆ. [ಕೆಪಿಎಲ್ : ಯಡಿಯೂರಪ್ಪ vs ಭಾರದ್ವಾಜ್]
ದೆಹಲಿಗೆ
ಪಯಣ
:
ಬಹುಮತವಿದ್ದರೂ
ಸಂವಿಧಾನಕ್ಕೆ
ವಿರುದ್ಧವಾಗಿ
ನಡೆದುಕೊಂಡಿರುವ
ಹಂಸರಾಜ್
ಅವರನ್ನು
ಕೂಡಲೆ
ವಾಪಸ್
ಕರೆಸಿಕೊಳ್ಳಿ
ಎಂದು
ಇಡೀ
ಬಿಜೆಪಿ
ನಾಯಕಗಣದಿಂದ
ಕೇಂದ್ರದ
ಮೇಲೆ
ಒತ್ತಡ
ಬರುತ್ತಿದೆ.
ಯಡಿಯೂರಪ್ಪ
ಮತ್ತು
120
ಶಾಸಕರು,
ಸಂಸದರು
ಮತ್ತು
ವಿಧಾನ
ಪರಿಷತ್
ಸದಸ್ಯರು
ಮೂರು
ಪ್ರತ್ಯೇಕ
ತಂಡಗಳಾಗಿ
ಬೆಂಗಳೂರಿನ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣ
ತಲುಪಿದ್ದು,
ದೆಹಲಿಗೆ
ಪಯಣ
ಬೆಳೆಸುತ್ತಿದ್ದಾರೆ.
ಮಂಗಳವಾರ
ರಾಷ್ಟ್ರಪತಿ
ಪ್ರತಿಭಾ
ಪಾಟೀಲ್
ಎದುರಿಗೆ
ಪರೇಡ್
ಮಾಡಲು
ನಿರ್ಧರಿಸಿರುವುದು
ಕೇಂದ್ರಕ್ಕೆ
ತಲೆನೋವಾಗಿ
ಪರಿಣಮಿಸಿದೆ.
ಪ್ರಧಾನಿ
ಮೇಲೆ
ಭಾರ
:
ವಿಮಾನ
ನಿಲ್ದಾಣಕ್ಕೆ
ತೆರಳುವ
ಮುನ್ನ
ಪತ್ರಕರ್ತರೊಂದಿಗೆ
ಮಾತನಾಡಿದ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು,
ಪ್ರಧಾನಿ
ಮಧ್ಯಪ್ರವೇಶಿಸಿ
ಸಮಸ್ಯೆಯನ್ನು
ಬಗೆಹರಿಸಬೇಕು
ಎಂದು
ಕೇಳಿದ್ದಾರೆ.
ಪ್ರಧಾನಿ
ಮನಮೋಹನ
ಸಿಂಗ್
ಅವರ
ಮೇಲೆ
ಅಪಾರ
ವಿಶ್ವಾಸ
ಮತ್ತು
ಗೌರವವಿದೆ.
ಅವರು
ಬಿಜೆಪಿಗೆ
ನ್ಯಾಯ
ದೊರಕಿಸಿಕೊಡುವಲ್ಲಿ
ಸಂದೇಹವಿಲ್ಲ
ಎಂದು
ಯಡಿಯೂರಪ್ಪ
ಚೆಂಡನ್ನು
ಪ್ರಧಾನಿ
ಅಂಗಳಕ್ಕೆ
ತಳ್ಳಿದ್ದಾರೆ.
ಸಂವಿಧಾನಕ್ಕೆ
ಕಂಟಕವಾಗಿರುವ
ರಾಜ್ಯಪಾಲರನ್ನು
ವಾಪಸ್
ಕರೆಯಿಸಿಕೊಳ್ಳಲು
ಅವರ
ಮೇಲೆ
ಒತ್ತಡ
ಹೇರುವುದಾಗಿ
ಹೇಳಿದ್ದಾರೆ.
[ರಾಜ್ಯಪಾಲರು
ಮಾಡಿದ್ದು
ಸರಿಯೆ?]