ರಾಜ್ಯಪಾಲರಿಗೆ ನಾಚಿಕೆ ಮಾನ ಮರ್ಯಾದೆಯಿಲ್ಲ : ಈಶ್ವರಪ್ಪ
ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಗಾಂಧೀಜಿ ಪ್ರತಿಮೆಯೆದಿರು ನಿಂತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಹಂಸರಾಜ್ ಭಾರದ್ವಾಜ್ ಅವರನ್ನು ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಳ್ಳುವಾಗ ಇಂಥ ಪದಪುಂಜಗಳನ್ನು ಧಾರಾಳವಾಗಿ ಬಳಸಿದರು. ಇಂಥ ಜನದ್ರೋಹಿ, ಸಂವಿಧಾನ ದ್ರೋಹಿ, ಪ್ರಜಾಪ್ರಭುತ್ವ ದ್ರೋಹಿ, ಕಾನೂನು ದ್ರೋಹಿ, ಸುಪ್ರೀಂ ಕೋರ್ಟ್ ದ್ರೋಹಿ ರಾಜ್ಯಪಾಲರನ್ನು ಹಿಂದಕ್ಕೆ ಪಡೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು. [ಕೆಪಿಎಲ್ : ಯಡಿಯೂರಪ್ಪ vs ರಾಜ್ಯಪಾಲ]
ಪಕ್ಷಭೇದ
ಮರೆತ
ಜನ
:
ರಾಜಭವನದ
ಎದಿರು
ಪ್ರತಿಭಟನೆ
ರದ್ದು
ಮಾಡಿದ
ಕಾರಣ,
ಮಹಾತ್ಮಾ
ಗಾಂಧಿ
ಪ್ರತಿಮೆ
ಎದಿರು
ಶಿಫ್ಟಾದ
ಕಾರಣ
ಕ್ಯಾಪಿಟಲ್
ಹೊಟೇಲಿನಿಂದ
ಪ್ರತಿಮೆವರೆಗೆ
ಈಶ್ವರಪ್ಪ
ನೇತೃತ್ವದಲ್ಲಿ
ಪಾದಯಾತ್ರೆ
ನಡೆಸಿತು.
ಈ
ಕಾರಣ
ಗಾಂಧಿ
ಪ್ರತಿಮೆ
ಇರುವ
ವೃತ್ತ
ಸೇರುವ
ಎಲ್ಲ
ರಸ್ತೆಗಳಲ್ಲಿ
ಭಾರೀ
ವಾಹನದಟ್ಟಣೆ
ಸಂಭವಿಸಿ,
ತೊಂದರೆ
ಅನುಭವಿಸಿದ
ಜನರು
ಪಕ್ಷಭೇದ
ಮರೆತು
ರಾಷ್ಟ್ರಪತಿ
ಆಳ್ವಿಕೆ
ಶಿಫಾರಸು
ಮಾಡಿದ
ರಾಜ್ಯಪಾಲರನ್ನು,
ಪ್ರತಿಭಟಿಸುತ್ತಿರುವ
ಬಿಜೆಪಿಯನ್ನು,
ಇದಕ್ಕೆ
ಕಾರಣರಾಗಿರುವ
ವಿರೋಧಪಕ್ಷಗಳನ್ನು
ಹೀನಾಯವಾಗಿ
ಬೈದುಕೊಂಡರು.
ನಾಲ್ಕು
ನಿರ್ಣಯ
:
ಇದಕ್ಕೂ
ಮೊದಲು
ಯಡಿಯೂರಪ್ಪ
ನೇತೃತ್ವದಲ್ಲಿ
ಕ್ಯಾಪಿಟಲ್
ಹೊಟೇಲಿನಲ್ಲಿ
ನಡೆದ
ಶಾಸಕಾಂಗ
ಪಕ್ಷದ
ಸಭೆಯಲ್ಲಿ
ನಾಲ್ಕು
ನಿರ್ಣಯಗಳನ್ನು
ಕೈಗೊಂಡಿತು.
ರಾಜ್ಯಪಾಲ
ಹಂಸರಾಜ್
ವಿರುದ್ಧ
ಖಂಡನಾ
ನಿರ್ಣಯ,
ಎಲ್ಲ
120
ಶಾಸಕರು
ಯಡಿಯೂರಪ್ಪನವರನ್ನು
ತಮ್ಮ
ನಾಯಕನನ್ನಾಗಿ
ಆಯ್ಕೆ
ಮಾಡಿದ
ಮತ್ತು
ಬಿಜೆಪಿಗೆ
ಬೆಂಬಲ
ನೀಡಿದ
11
ಬಿಜೆಪಿ
ಶಾಸಕರನ್ನು
ಅಭಿನಂದಿಸುವ
ಮೂರು
ನಿರ್ಣಯಗಳನ್ನು
ಕೈಗೊಂಡಿತು.
ಇಂದಿನಿಂದ
ಹತ್ತು
ದಿನಗಳ
ಆರಂಭವಾಗಬೇಕಿದ್ದ
ವಿಶೇಷ
ಜಂಟಿ
ಅಧಿವೇಶನವನ್ನು
ಮುಂದೂಡಿ
ಜೂನ್
2ರಿಂದ
ನಡೆಸುವ
ನಿರ್ಣಯವನ್ನೂ
ತೆಗೆದುಕೊಳ್ಳಲಾಯಿತು.