ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಶಾಸಕರು ಅನರ್ಹರಲ್ಲ: ಬೋಪಯ್ಯ ಆದೇಶಕ್ಕೆ ಸೋಲು

By Srinath
|
Google Oneindia Kannada News

Yeddyurappa
ನವದೆಹಲಿ, ಮೇ 13: ಕರ್ನಾಟಕ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದ 16 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.

ಇದರೊಂದಿಗೆ ಹದಿನಾರೂ ಶಾಸಕರು ತಮ್ಮ ಶಾಸಕತ್ವವನ್ನು ಉಳಿಸಿಕೊಂಡಂತಾಗಿದೆ. ಇವರೆಲ್ಲ ಜೆಡಿಎಸ್ ನಾಯಕರಾದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಮತ್ತು ನ್ಯಾ. ಸಿರಿಯಾಕ್ ಜೋಸೆಫ್ ಅವರ ನ್ಯಾಯಪೀಠ ಶುಕ್ರವಾರ ಈ ತೀರ್ಪು ನೀಡಿದೆ. ಸ್ಪೀಕರ್ ಬೋಪಯ್ಯ ಕ್ರಮಕ್ಕೆ ಪೀಠ ತೀವ್ರವಾಗಿ ಕಿಡಿಕಾರಿದೆ. ಬೋಪಯ್ಯ ಅವರ ಸ್ಥಾನಕ್ಕೆ ಮುಳುಗುನೀರು ತಂದಿದೆ.

ಇದರಿಂದ ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ಭವಿಷ್ಯ ಡೋಲಾಯಮಾನವಾಗಿದೆ. ಬೆಳಗ್ಗೆಯಷ್ಟೇ ಚುನಾವಣೆ ಗೆಲುವಿನ ಅಲೆಯಲ್ಲಿ ಬೀಗುತ್ತಿದ್ದ ಯಡಿಯೂರಪ್ಪ ಈಗ ಬಿರುಗಾಳಿಗೆ ಸಿಕ್ಕಿಕೊಂಡಿದ್ದಾರೆ. ಬಿಜೆಪಿ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ರಾಜ್ಯ ರಾಜಕಾರಣದಲ್ಲಿ ಕೋಲಾಹಲ ವಾತಾವರಣ ಮೂಡಿದೆ.

11 ಬಿಜೆಪಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಆನಂದ್ ಆಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ಬಿ.ಎನ್. ಸಾರ್ವಭೌಮ, ಬ್ರಹ್ಮಗೌಡ ಎಚ್. ಕಾಗೆ, ವೈ. ಸಂಪಂಗಿ, ಜಿ.ಎನ್. ನಂಜುಂಡಸ್ವಾಮಿ, ಎಂ.ವಿ. ನಾಗರಾಜು, ಶಿವಣ್ಣಗೌಡ ನಾಯಕ್, ಎಚ್.ಎಸ್. ಶಂಕರಲಿಂಗೇಗೌಡ ಮತ್ತು ಬೆಳ್ಳುಬ್ಬಿ ಸಂಗಪ್ಪ ಕಾಳಪ್ಪಗೆ ಜಯ ಸಿಕ್ಕಿದೆ. ಹಾಗೆಯೇ, 5 ಪಕ್ಷೇತರ ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ, ಡಿ. ಸುಧಾಕರ್ ಹಾಗೂ ಶಿವರಾಜ ತಂಗಡಗಿ ಅವರೂ ಗೆಲುವಿನ ನಗೆ ಬೀರಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ವಿರುದ್ಧ 11 ಮಂದಿ ಬಿಜೆಪಿ ಶಾಸಕರು ಮತ್ತು 5 ಪಕ್ಷೇತರರು 2010ರ ಅಕ್ಟೋಬರ್ ನಲ್ಲಿ ಬಂಡೆದ್ದಿದ್ದರು. ಜತೆಗೆ ರಾಜ್ಯಪಾಲರಿಗೆ ಪತ್ರ ಬರೆದು ತಾವು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದಿರುವುದಾಗಿ ತಿಳಿಸಿದ್ದರು.

English summary
The Supreme Court on Friday (May 13) has dismissed the Karnataka Speaker's ruling on disqualification of 11 BJP and 5 independent MLAs of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X